ವೇಷದಲ್ಲಿ ಭಕ್ತನಾದಡೇನು
ವೇಷದಲ್ಲಿ ಮಹೇಶನಾದಡೇನು
ಗುಣವಿಲ್ಲದನ್ನಕ್ಕರ
ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು
ರುಚಿಯಿಂದಲ್ಲದೆ ರೂಪದಿಂದವೆ
ಕಪಿಲಸಿದ್ಧ ಮಲ್ಲಿಕಾರ್ಜುನಾ.
ಭಕ್ತ ಸಮೂಹದಲ್ಲಿ ಸರ್ವಕ್ಕೂ ಆದ್ಯತೆ ಇದೆ, ಭೂಮಿ ತಾಯಿಯ ಗರ್ಭದಲ್ಲಿ ಸರ್ವ ಜೀವ ಸಂಕುಲಕ್ಕೂ ಮಾನ್ಯತೆ ಇದೆ. ಶ್ರೀ ಸಿದ್ದರಾಮನ ಭಕ್ತಿ ಮಂಡಲದಲ್ಲಿ ಸರ್ವರಿಗೂ ಆರ್ಶಿವಾದವಿದೆ, ಶ್ರೀ ಸಿದ್ದರಾಮೇಶ್ವರು ಸರ್ವ ಕುಲವು ಪೂಜಿಸುವ ಮಹಾನ್ ಶರಣರು,ಶ್ರೀ ಶರಣರ ವಚನಗಳು ಕಲಿಯುಗದ ಮನುಷ್ಯರು ಅಳವಡಿಸಿಕೊಳ್ಳುವ ತತ್ವಸಂದೇಶಗಳು, ಸಿದ್ದರಾಮರ ಭಕ್ತಿ ದೈವ ಶ್ರೀ ಮಲ್ಲಿಕಾರ್ಜುನಲ್ಲಿ ಮಿಂದು, ಶರಣ ಕಾಯಕದಲ್ಲಿ ಅರ್ಪಿತವಾಗಿದೆ. ಶರಣ ಶತಮಾನದ ದೈವ ಸಿದ್ದರಾಮನ ಕಾಯಕವನ್ನು ಪ್ರಸ್ತುತ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಸಮಾಜದ ಜನರ ಕಷ್ಟಗಳಿಗೆ ಆಸರೆಯಾಗಿ ನಿಂತು ಶರಣ ತತ್ವದಲ್ಲಿ ನಡೆಸಿಕೊಂಡು ಸಾಗುತ್ತಿದ್ದಾರೆ.
ಹೀಗೆ ಸಿದ್ದರಾಮೇಶ್ವರರ ವಚನಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಶರಣರ ತತ್ವದಲ್ಲಿ ಭಕ್ತಿಯನಿಟ್ಟು ನಡೆದುಕೊಂಡು ಬರುತ್ತಿರುವ ಪಿ, ಎಸ್, ಶ್ಯಾಮಣ್ಣ ಅವರಿಗೆ ಕರ್ನಾಟಕ ಸರ್ಕಾರ ಕಾಯಕಯೋಗಿ ಸಿದ್ದರಾಮ ಪ್ರಶಸ್ತಿಯನ್ನು ನೀಡಲು ಆಯ್ಕೆ ಮಾಡಿರುವುದು ತುಂಬಾ ಸಂತೋಷದ ವಿಚಾರ. ಶ್ಯಾಮಣ್ಣನವರು ಸಮವನ್ನು ನಾಟಕವಾಗಿ, ರೂಪಕವಾಗಿ, ಸಂಗೀತದ ಮೂಲಕ ಮನಪರಿವರ್ತನೆ ಮಾಡಬಹುದಾದ ದೊಡ್ಡಶಕ್ತಿಯಿದೆಯೆಂದು ನಂಬಿದವರು. ಹೀಗೆ ಬಡತನದಲ್ಲಿ ತಮ್ಮ ಕಾಯಕವನ್ನು ಮರೆಯದೆ ತಮ್ಮ ಮನೆಯ ಬಡತನವನ್ನೇ ಲೆಕ್ಕಿಸದೆ ಕಳೆದ ಐದು ದಶಕಗಳಿಂದ ಹಳ್ಳಿಗೆ ಏಕಾ ರಾತ್ರಿ ಪಟ್ಟಣಕ್ಕೆ ಪಂಚಾರಾತ್ರಿಗಳಂತೆ ಸಾಮಾಜಿಕವಾಗಿ, ಪೌರಾಣಿಕ ಆಧ್ಯಾತ್ಮಿಕ ನಾಟಕಗಳನ್ನು ನಿರ್ಮಿಸಿ, ಅಭಿನಯಿಸಿ ರಂಗಭೂಮಿಯಲ್ಲಿ ತಮ್ಮದೆಯಾದ ಕಾಯಕಗೈದ ಮಹಾನ್ ಸಾಧಕರು.
ಶ್ಯಾಮಣ್ಣನವರು ಅಭಿನವ ಗಾಂಧಿ, ದಾಸ ಸಂತ, ಮಹಾಂತ, ಶರಣ ದೈವಾತ್ಮರನ್ನು ರಂಗ ಕಾಯಕದಲ್ಲಿ ಸಮಾಜದ ಕಣ್ಣಿಗೆ ತೋರಿಸಿದ ಮಹಾನ್ ವ್ಯಕ್ತಿಗಳು, ಬಡತನದ ಬಗೆ ಬಗ್ಗೆ ಚಿಂತಿಸದೆ ತಮ್ಮ ಕಲೆಯ ಮೂಲಕ ಜನ ಮನಸ್ಸನ್ನ ಗೆದ್ದವರು, “ಮನೆ ನೋಡಾ ಬಡವರ ಮನ ನೋಡಾ ಘನಮನ ಸಂಪನ್ನರ” ಎಂಬ ಶರಣ ವಚನದಂತೆ ರಂಗಭೂಮಿ ಕಾಯಕದಲ್ಲಿ ಎಲೆಮರೆಯ ಕಾಯಿಯಂತಿರುವ ಶ್ಯಾಮಣ್ಣ ಅವರಿಗೆ ಕರ್ನಾಟಕ ಸರ್ಕಾರ ಕೊಡುವ ಈ ಸಾಲಿನ ಕಾಯಕಯೋಗಿ ಸಿದ್ದರಾಮ ಪ್ರಶಸ್ತಿಗೆ ಇವರನ್ನ ಆಯ್ಕೆ ಮಾಡಿರೋದು ಕಲೆಗೆ ಒಳ್ಳೆಯ ಗೌರವ ಕೊಟ್ಟಿದೆ.
ಅಂದು ಬಡತನವನ್ನು ಲೆಕ್ಕಿಸದೆ ರಂಗಭೂಮಿಯಲ್ಲಿ ತನ್ನ ಕಾಯಕಗೈದ ಶ್ಯಾಮಣ್ಣನವರಿಗೆ ಇಂದು ಉತ್ತಮವಾದ ಪ್ರಶಸ್ತಿ ಲಭಿಸಿದೆ. ಈ ಒಂದು ಪ್ರಶಸ್ತಿಯ ಮೂಲಕ ಅವರ ರಂಗ ಕಲೆಯ ಗೌರವವು ಇನ್ನು ಹೆಚ್ಚಿದೆ, ಅವರ ಬಡತನಕ್ಕೆ ಈ ಪ್ರಶಸ್ತಿ ಮೂಲಕ ಐದು ಲಕ್ಷದ ಮೌಲ್ಯವು ಕೂಡ ಕೊಡುವುದರಿಂದ ಅವರ ಬಡಕುಟುಂಬಕ್ಕೆ ತುಂಬಾ ಅಮೂಲ್ಯವಾದ ಗೌರವ ಸಿಕ್ಕಿದೆ ಅಂತ ಭಾವಿಸಬಹುದು. ಏನೇ ಆಗಲಿ ಶ್ಯಾಮಣ್ಣನವರಿಗೆ ಇದೆ ರೀತಿಯಲ್ಲಿ ಪ್ರಶಸ್ತಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಲಭಿಸಿ ಅವರ ಕಲಾ ಜೀವನಕ್ಕೆ ಇನ್ನು ಸ್ಫೂರ್ತಿಯಾಗಲಿ ಅಂತ ಅರೀ ಸಿದ್ದರಾಮೇಶ್ವರ ದೈವದಲ್ಲಿ ಬೇಡಿಕೊಳ್ಳುವೆ. ಹಾಗೆ ಈ ರೀತಿಯಲ್ಲಿ ಸಾಧಕರನ್ನು ಸಮಾಜದ ಬೆಳಕಿಗೆ ಕರೆತಂದು ಗುರುತಿಸಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೆ,
ಸರ್ವರಿಗೂ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿಯ ಶುಭಾಶಯಗಳು.
ಭೋವಿ ರಾಮಚಂದ್ರ
ಹರಪನಹಳ್ಳಿ
8861588118.