- Advertisement -
ಸಿಂದಗಿ: ತಾಲೂಕಿನ ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಲಕ್ಷ್ಮಿ ಲಕ್ಷ್ಮಣ್ ಕಲಾಲ್ ವಿದ್ಯಾರ್ಥಿನಿಯು ಸಿಂದಗಿ ತಾಲ್ಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಂ ಹರನಾಳ, ಕ್ಷೇತ್ರ ಸಮನ್ವಯಾಧಿಕಾರಿ ಐ ಎಸ್ ಟಕ್ಕೆ, ಗೋಲಗೇರಿ ಕ್ಲಸ್ಟರಿನ ಸಿ.ಆರ್.ಪಿ ಜಿ ಎನ್ ಪಾಟೀಲ್, ಮುಖ್ಯ ಶಿಕ್ಷಕ ಆರ್ ಜಿ ಬನಸಿ, ಸಹ ಶಿಕ್ಷಕರಾದ ಮಂಜುನಾಥ ಮಣೂರ, ಶರಣು ಚಟ್ಟಿ, ಡಿ ಎಂ ಮುಂಡಾಸೆ, ಎಂ ಎಸ್ ಚೌಧರಿ, ರಾಜಶೇಖರ ಕರ್ನಾಳ, ರಾಜಶ್ರೀ ಕರ್ನಾಳ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.