ಮೂಡಲಗಿ: ಭಗವಂತನನ್ನು ಭಕ್ತಿಯಿಂದ ಕಾಣಬೇಕು. ಆತನಲ್ಲಿ ಶೃದ್ಧೆ, ನಂಬಿಕೆ ಇಟ್ಟರೇ ಜೀವನದಲ್ಲಿ ಸುಖ ಜೀವನ ನಡೆಸಬಹುದು ಎಂದು ಷಷ್ಟ್ಯಬ್ಧಿ ಸಂಭ್ರಮದ ಗೌರವಾಧ್ಯಕ್ಷರು ಹಾಗೂ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜಗುಣ ದೇವರ ಷಷ್ಟ್ಯಬ್ಧಿ ಸಂಭ್ರಮ ಸಮಾರಂಭದಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ನಿಜಗುಣ ದೇವರಿಗೆ ಕಿರೀಟ ಧಾರಣೆ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಇಂದಿನ ಒತ್ತಡ ಜೀವನದಲ್ಲಿ ಮನುಷ್ಯ ಧಾರ್ಮಿಕತೆಯಿಂದ ದೂರವುಳಿಯುತ್ತಿದ್ದು ಸತ್ಸಂಗದ ಮೂಲಕ ಆತನಲ್ಲಿ ಆಧ್ಯಾತ್ಮಿಕ ಮನೋಭಾವನೆ ಮೂಡಬೇಕಾದರೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಗುರುವಿನ ಕೃಪಾಶೀರ್ವಾದದಿಂದ ಶ್ರೀ ನಿಜಗುಣ ದೇವರು ಸುಕ್ಷೇತ್ರ ಹುಣಶ್ಯಾಳವನ್ನು ನಂದನವನ ಮಾಡಿದ್ದಾರೆ.
ಭಕ್ತರು ಶ್ರೀಗಳ ಮೇಲಿಟ್ಟ ಪ್ರೀತಿ, ವಿಶ್ವಾಸದಿಂದ ಮಠಗಳು ಬೆಳೆಯಲಿಕ್ಕೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಬೀದರಿನ ಗಣೇಶಾನಂದ ಮಹಾರಾಜರು, ಸುಣಧೋಳಿಯ ಶ್ರೀ ಅಭಿನವ ಶಿವಾನಂದ ಮಹಾಸ್ವಾಮೀಜಿ, ಬೆಂಗಳೂರಿನ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಮಾದಾರ ಚನ್ನಯ್ಯಪೀಠದ ಚನ್ನಯ್ಯ ಮಹಾಸ್ವಾಮಿಗಳು, ಕೊಟಬಾಗಿಯ ಶ್ರೀ ಪ್ರಭುದೇವರು, ಶಾಮಾನಂದ ಪೂಜೇರಿ ಇದ್ದರು.