Homeಸುದ್ದಿಗಳುಮೌನೇಶ್ವರ ಸದ್ಗುರುವಿನ ತೊಟ್ಟಿಲು ಕಾರ್ಯಕ್ರಮ

ಮೌನೇಶ್ವರ ಸದ್ಗುರುವಿನ ತೊಟ್ಟಿಲು ಕಾರ್ಯಕ್ರಮ

ಸಿಂದಗಿ: ಭರತ ಭುವಿಯ ಕನ್ನಡ ಮಣ್ಣಿನ ನೆಲದಲ್ಲಿ ಅನೇಕ ಸಾಧು ಸತ್ಪುರುಷರು ಶರಣರು ಭುವಿಗೆ ಮಾನವ ರೂಪದಲ್ಲಿ ಜನಿಸಿ ಮಾನವ ಕುಲ ಒಂದೆ ಎಂದು ಸಾರಿದ ಮಹಾನ್ ಶರಣರಲ್ಲಿ ತಿಂಥಣಿ ಮೌನೇಶ್ವರರು ಒಬ್ಬರು ಎಂದು ಪರಮ ಪೂಜ್ಯ ಏಕದಂಡಗಿ ಕಾಳಹಸ್ತೇಂದ್ರ ಸಾಮೀಜಿ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭಧ್ರೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಗೋನಾಳ ಗ್ರಾಮದಲ್ಲಿ ಶಿವನ ದರ್ಶನ ದಿಂದ ಸಾಕ್ಷಾತ್ಕಾರವಾಗಿಸಿಕೊಂಡ ಶೇಷಮ್ಮ ಶೇಷಪ್ಪನ ಮಗನಾಗಿ ಭೂಲೋಕದ ಕರುನಾಡಿನ ಗೋನಾಳದ ವಿಶ್ವಕರ್ಮದ ಮಗನಾಗಿ ಜನಿಸಿ ಲೋಕ ಕಲ್ಯಾಣರ್ಥವಾಗಿ ಮಾನ ಕುಲ ಒಂದೆ ಇಲ್ಲಿ ಬೇಧಭಾವ ಸಲ್ಲದು ಎಂಬ ಸಂದೇಶ ಸಾರಿ ಮಹಾ ಮಾನವತಾವಾದಿ ತಿಂಥಣಿ ಮೌನೇಶ್ವರ ಹೆಸರುವಾಸಿಯಾಗಿ ಶತ ಶತಮಾನಗಳೆ ಕಳೆದರು ಇಂದಿಗು ಚರಿತ್ರವಾಸಿಯಾಗಿ ನಮ್ಮ ಜೀವನದ ಬೆಳಕಾಗಿ ಮಹಾ ಪುರಾಣ ಪ್ರವಚನಗಳಲ್ಲಿ ಇರುವಂತ ಸದ್ಗುರುವಿನ ತೊಟ್ಟಿಲು ಕಾರ್ಯಕ್ರಮ ಮೋರಟಗಿ ಮಾತೆಯರಿಂದ ನಡೆಯಿತು.

ಅಂದು ಗೋನಾಳದಲ್ಲಿ ತೊಟ್ಟಿಲು ಕಾರ್ಯಕ್ರಮ ನಡೆದ ವೈಭವದ ಕಾರ್ಯಕ್ರಮ ಇಂದು ವೀರಭಧ್ರೇಶ್ವರ ಜಾತ್ರಾ ವೈಭದ ತೊಟ್ಟಿಲು ಕಾರ್ಯಕ್ರಮ ಮರುಕಳಿಸಿತ್ತು,

ಕಾರ್ಯಕ್ರಮದಲ್ಲಿ ನಿಂಗನಗೌಡ ಪಾಟೀಲ, ಪ್ರಕಾಶ ಅಡಗಲ್ಲ, ರೇವಣಸಿದ್ಧ ಮಸಳಿ, ಶರಣಪ್ಪ ಅಣಬಸ್ಟಿ, ಭೀಮಣ್ಣ ಸಾಹು ಕೋರಿ, ಸಿದ್ರಾಮಯ್ಯ ಮಠಪತಿ, ಗುರುಪಾದಪ್ಪ ನೇಲ್ಲಗಿ, ಸಿದ್ದಣ್ಣ ಗಡಗಿ, ಇತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group