ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

 

ದೂರಾಗಿ ದುಃಖಿಸುವ ಶ್ರೀರಾಮಸೀತೆಯರ
ಒಂದುಗೂಡಿಸಿಬಿಟ್ಟ ವಾಯುಪುತ್ರ
ಅಗಲಿರುವ ಜೀವಾತ್ಮ‌ ಪರಾಮಾತ್ಮರೈಕ್ಯಕ್ಕೆ
ಪವನಜನೆ ಕಾರಣನು – ಎಮ್ಮೆತಮ್ಮ

ಶಬ್ಧಾರ್ಥ
ವಾಯುಪುತ್ರ = ಹನುಮಂತ. ಪವನಜ‌ = ಆಂಜನೇಯ

ತಾತ್ಪರ್ಯ
ಇದು ರಾಮಾಯಣದಲ್ಲಿ‌ ಬರುವ‌ ಹನುಮಂತನ ಪ್ರಸಂಗ.
ಸೀತೆಯನ್ನು ರಾವಣ ಅಪಹರಣ ಮಾಡಿಕೊಂಡುಹೋಗಿ
ಲಂಕೆಯ ಅಶೋಕವನದಲ್ಲಿ ಇಟ್ಟಿದ್ದ. ಸೀತೆ ಅಲ್ಲಿ ದುಃಖಿಸುತ್ತ
ಕಾಲ ಕಳೆಯುತ್ತಿದ್ದಳು. ಆಗ ಹುಡುಕುತ್ತ ಕಿಷ್ಕಿಂದೆಗೆ ಬಂದ
ರಾಮಲಕ್ಷ್ಮಣರಿಗೆ ಹನುಮಂತ ಮತ್ತು‌ ಸುಗ್ರೀವ ಸ್ನೇಹಿರಾದರು.

ಸೀತೆಯನ್ನು ಹುಡುಕಲು ಸುಗ್ರೀವ ಹನುಮಂತನನ್ನು‌ ದಕ್ಷಿಣಕ್ಕೆ ಕಳಿಸಿದ. ಹನುಮಂತ ಲಂಕೆಗೆ ಹಾರಿ ಸೀತೆಗೆ ರಾಮ‌ ಕೊಟ್ಟ ಉಂಗುರ ಕೊಟ್ಟು ಲಂಕೆಸುಟ್ಟು ವಾಪಾಸು ಬಂದ.ಆಮೇಲೆ‌ ರಾಮ‌ ರಾವಣನ ಮೇಲೆ‌‌ ಯುದ್ಧ ಮಾಡಿ ಸೀತೆಯನ್ನು‌ ತಂದ. ಇದು‌ ಮೇಲ್ನೋಟಕ್ಕೆ‌ ಕಥೆ.ಆದರೆ ಇದರಲ್ಲಿ‌ ಅಧ್ಯಾತ್ಮದ ತಂತ್ರ ಅಡಗಿದೆ. ರಾಮನೆಂದರೆ ಆತ್ಮರಾಮ‌ ಪರಮಾತ್ಮ ಸೀತೆ‌‌ ಎಂದರೆ‌ ಶಾಂತಿಯಿಲ್ಲದ ಜೀವಾತ್ಮ. ಇವೆರಡು ದೇಹದಲ್ಲಿ‌ ಬೇರೆಯಿರುವುದರಿಂದ ದುಃಖದುಮ್ಮಾನ.ಇವೆರಡನ್ನು‌ ಒಂದುಗೂಡಿಸಿದರೆ ಶಾಂತಿ.ಆ ಕೆಲಸವನ್ನು‌ ಉಸಿರಿಗೆ ಅಧೀನವಾಗಿರುವ ಮನಸ್ಸು ಮಾಡುತ್ತದೆ. ವಾಯುಪುತ್ರ ಎಂದರೆ‌ ಕಪಿಯಂತಿರುವ ಮನಸ್ಸು. ಹನುಮಂತನಿಗೆ ಅಂಜಿನೀಪುತ್ರ ಆಂಜನೇಯ ಎಂದು‌ ಕರೆವರು. ಅಂಜನ ಎಂದರೆ ವಿಶೇಷವಾದ ಕಾಡಿಗೆಯಿಂದ ನೋಡುವ ನೋಟ. ಉಸಿರು, ಕಣ್ಣು ಮತ್ತು ಮನಸುಗಳು‌ ಕೂಡಿದರೆ ಜೀವಾತ್ಮ‌ ಪರಮಾತ್ಮನನ್ನು ಸೇರುತ್ತದೆ. ಕೂಡಿಸುವ ಮನವೆ ಪವನಜ

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 944903099

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group