ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

Must Read

 

ಪಟ್ಟಣಕೆ ದಾರಿಯಿದೆ ತೋರಿಸುವ ಫಲಕವಿದೆ
ನಡೆದುಹೋದರೆ ಮಾತ್ರ ತಲುಪಬಹುದು
ದೇವಪಥ ತೋರಿಸುವ ಗುರುದೇವನಿದ್ದರೂ
ಸಾಧಿಸುವ ಛಲಬೇಕು‌ – ಎಮ್ಮೆತಮ್ಮ

ಶಬ್ಧಾರ್ಥ
ಫಲಕ = ದಾರಿ ತೋರಿಸುವ ಹಲಗೆ. ಮಾರ್ಗಸೂಚಿ

ತಾತ್ಪರ್ಯ
ಒಂದು‌ ನಗರಕ್ಕೆ ಹೋಗುವ ಮಾರ್ಗವನ್ನು‌ ತೋರಿಸಲು
ಒಂದು ಹಲಗೆಯಲ್ಲಿ‌ ಅಥವಾ ಬಂಡೆಗಲ್ಲಿನಲ್ಲಿ ಬರೆದು ನಿಲ್ಲಿಸಿರುತ್ತಾರೆ. ಅದನ್ನು ನೋಡಿ ತಿಳಿದುಕೊಂಡು ‌ತೋರಿದ
ದಾರಿಯಲ್ಲಿ ಚಲಿಸಿದರೆ ನಾವು ಮುಟ್ಟಬೇಕಾದ ಪಟ್ಟಣವನ್ನು
ತಲುಪಬಹುದು. ಹಾಗೆ ದೇವರನ್ನು‌ ಕಾಣುವ‌ ಮಾರ್ಗವನ್ನು
ತಿಳಿಸುವ ಗುರುದೇವನೊಬ್ಬನಿದ್ದರೂ‌‌‌ ಕೂಡ‌ ನಾವು ಸತತ
ಸಾಧನೆಮಾಡುವ ದೃಢ‌ ನಿರ್ಧಾರ ಮಾಡಬೇಕು. ಹಾಗಾದರೆ
ಮಾತ್ರ ಸಾಧನೆಯ ಸಿದ್ಧಿ ಶಿಖರವನ್ನು‌ ಏರಬಹುದು.ಗುರು
ತಿಳಿಸಿದ ಧರ್ಮಬೋಧೆಯನ್ನು ಅರಿತುಕೊಂಡು ಅವರು
ಹೇಳಿದ ವ್ರತನಿಯಮಗಳನ್ನು ಚಾಚೂ ತಪ್ಪದೆ ಪರಿಪಾಲಿಸಿ
ನಡೆದುಕೊಂಡರೆ ಮಾತ್ರ ಗುರಿ ತಲುಪಬಹುದು. ಗುರುವಿನಲ್ಲಿ
ದೃಢ ವಿಶ್ವಾಸ ನಂಬಿಗೆ ಇರಬೇಕು. ಗುರು ಕೊಟ್ಟ ಬೋಧೆಗೆ
ದೀಕ್ಷೆ ಎನ್ನುತ್ತಾರೆ. ದೀಕ್ಷೆ ಎಂದರೆ ದೀಯತೇ ಪರಮಂ ಜ್ಞಾನಂ ಕ್ಷೀಯತೆ ಪಾಪಸಂಚಯಂ ಎಂದು ಹೇಳುತ್ತಾರೆ. ದೀಕ್ಷೆ ಎಂದರೆ
ಬದ್ಧಕಂಕಣನಾಗಿ ವ್ರತನೇಮಗಳನ್ನು‌ ಬಿಡದೆ ಮಾಡುವುದು.
ಶಿಷ್ಯನಾದವನಿಗೆ ಆ ಬದ್ಧತೆ, ಛಲ ಬೇಕಾಗುತ್ತದೆ.ಪರಧನವ , ಪರಸತಿಯ,ಪರದೈವವನೊಲ್ಲೆನೆಂಬ; ಲಿಂಗ ಜಂಗಮ ಒಂದೇ, ಪ್ರಸಾದ ದಿಟವೆಂಬ ಛಲಬೇಕು ಶರಣನಿಗೆ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ ಎಂದು ‌ಬಸವಣ್ಣ ಸಾಧಕನಿಗಿರಬೇಕಾದ‌ ಛಲವನ್ನು ಹೇಳುತ್ತಾನೆ.

ರಚನೆ ಮತ್ತ ವಿವರಣೆ
ಎನ್.ಶರಣಪ್ಪ‌ ಮೆಟ್ರಿ
ಮೊ: 9449030990

Latest News

ಪ್ರಕೃತಿ ಮತ್ತು ಪ್ರೀತಿಯ ಅದ್ಭುತ ಸಂಗಮ: ಮೇಘದೂತದ ಮಹತ್ವ ವಿವರಿಸಿದ ಪ್ರೊ. ನಾರಾಯಣಘಟ್ಟ

    ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು. ...

More Articles Like This

error: Content is protected !!
Join WhatsApp Group