Homeಸುದ್ದಿಗಳುದಿ.೫ ರಂದು ಸಮೀರವಾಡಿ ಕಬ್ಬು ಬೆಳೆಗಾರರ ಸಭೆ

ದಿ.೫ ರಂದು ಸಮೀರವಾಡಿ ಕಬ್ಬು ಬೆಳೆಗಾರರ ಸಭೆ

ಸಭೆಯಲ್ಲಿ ರೈತರು ಪಾಲ್ಗೊಳ್ಳಲು ಕರೆ

ಮೂಡಲಗಿ: ಸಮೀಪದ ಸೈದಾಪೂರ ಸಮೀರವಾಡಿಯ ಶ್ರೀ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನ. ೫ ರಂದು ಬೆಳಗ್ಗೆ ೧೧ ಗಂಟೆಗೆ ರೈತರ ವಿಶೇಷ ಸರ್ವಸಾಧಾರಣ ಸಭೆ ಕರೆಯಲಾಗಿದೆ.

ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘ ಹಾಗೂ ಗೋದಾವರಿ ಸಕ್ಕರೆ ಕಾರ್ಖಾನೆಯವರು ಸೇರಿ ನ. 2 ರಂದು ಜರುಗಿದ ಸಭೆಯಲ್ಲಿ ಕಬ್ಬಿನ ಬೆಲೆ ಕುರಿತು ಚರ್ಚಿಸಿ 2021-22 ನೇ ಸಾಲಿನ 2 ನೇ ಕಂತಿನ ಹಣ ರೂ.62 ಹಾಗೂ 2022-23 ನೇ ಸಾಲಿನ ಮೊದಲ ಕಂತು ರೂ.2800 ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನ. 3 ರಂದು ಕೆಲವು ರೈತರು ಅಸಮಾಧಾನಗೊಂಡು ಈ ಒಪ್ಪಂದಕ್ಕೆ ಸಮ್ಮತಿಸದೇ ಹೆಚ್ಚಿನ ಬೇಡಿಕೆಯ ದರ ಘೋಷಣೆಯಾಗುವವರೆಗೆ ಕಾರ್ಖಾನೆ ಪ್ರಾರಂಭ ಮಾಡಬಾರದೆಂದು ಪಟ್ಟು ಹಿಡಿದಿದ್ದಾರೆ. ಒಂದು ಕಡೆ ಒಪ್ಪಂದ, ಮತ್ತೊಂದು ಕಡೆ ವಿರೋಧದಿಂದ ರೈತರಲ್ಲಿ ಉಂಟಾದ ಗೊಂದಲ ನಿವಾರಣೆಗೆ, ಎಲ್ಲ ರೈತರ ಸಲಹೆ ಸೂಚನೆ ಆಲಿಸಲು ಸಮೀರವಾಡಿ ಕಾರ್ಖಾನೆಗೆ ಕಬ್ಬು ಪೂರೈಸುವ ಎಲ್ಲ ರೈತರು ಈ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ತಿಳಿಸಬೇಕೆಂದು ಸೈದಾಪೂರ-ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ ಕಾರ್ಯದರ್ಶಿ ರಂಗನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group