Homeಸುದ್ದಿಗಳುಒಂದೇ ಕುಟುಂಬದಲ್ಲಿ ಒಬ್ಬರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು. ಹುಮನಾಬಾದ ಜನರ ಗೋಳು ಕೇಳುವವರಿಲ್ಲ

ಒಂದೇ ಕುಟುಂಬದಲ್ಲಿ ಒಬ್ಬರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು. ಹುಮನಾಬಾದ ಜನರ ಗೋಳು ಕೇಳುವವರಿಲ್ಲ

ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯ ಮಿಶ್ರಿತ ನೀರಿನಿಂದ ಗಬ್ಬುವಾಸನೆ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು….

ನಂಬಿ ಓಟು ಹಾಕಿದ ಜನರ ಗೊಳು ಪರಿಹರಿಸಲು ಅಸಮರ್ಥರಾದರು ಶಾಸಕರು..

ಬೀದರ – ಗಡಿ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮಾಣಿಕನಗರ ಗ್ರಾಮದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಹುಮನಾಬಾದ ಪಟ್ಟಣದ ವಿವಿಧ ಕಂಪನಿಗಳಿಂದ ಕ್ಯಾಮಿಕಲ್ ಮಿಶ್ರಣ ನೀರನ್ನು ಬಿಡುವುದರಿಂದ ಅನೇಕ ಜಲಚರ ಜೀವಿಗಳು ಮತ್ತು ಪ್ರಾಣಿ ಪಕ್ಷಿಗಳ ಸಾವು ದಿನೇ ದಿನೇ ಹೆಚ್ಚಾಗುತ್ತಿದೆ.

ಸುತ್ತಮುತ್ತಲಿನ ಗ್ರಾಮಗಳಾದ ಮಾಣಿಕನಗರ, ಗಡವಂತಿ, ಮೋಳಕೆರಾ,ಬಸಂತಪೂರ ಗ್ರಾಮಗಳ ಸಾರ್ವಜನಿಕರು ಚರ್ಮ ರೋಗ ಸೇರಿದಂತೆ ಇತರೆ ಅನೇಕ ರೋಗಕ್ಕೆ ತುತ್ತಾಗುತ್ತಾ ಇದ್ದರೂ ಸ್ಥಳೀಯ ಶಾಸಕರು ಕಣ್ಣು ಮುಚ್ಚಿ ಕೂತಿರುವುದು ಯಾಕೆ ಎಂಬುದು ಒಂದು ಪ್ರಶ್ನೆ ಆಗಿದೆ.

ಕಂಪನಿಯ ನೀರು ಗ್ರಾಮದಲ್ಲಿ ಹರಡಿ, ಮಂದಿರದಲ್ಲಿ ದುರ್ವಾಸನೆ ಬಂದರೂ ಕಂಪನಿಯ ವಿರುದ್ಧ ಮಾತು ಆಡದ ಸ್ಥಳೀಯ ಶಾಸಕರ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು. ಈ ಕ್ಷೇತ್ರಕ್ಕೆ ಒಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಜನರ ಗೋಳು ಕೇಳುವವರಿಲ್ಲದಂತಾಗಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಮನೆ ಮಾಡಿದ್ದು ಗ್ರಾಮಸ್ಥರು ನರಕ ಯಾತನೆ ಅನುಭವಿಸುತ್ತಿದ್ದೆವೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತಿ ವತಿಯಿಂದ ಜಿಲ್ಲಾಧಿಕಾರಿಗಳಿಗೂ ಸಹ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಅಧಿಕಾರಿಗಳು ಹಾಗೂ ಕಾರ್ಖಾನೆಯವರು ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನಲಾಗಿದೆ. ಶೀಘ್ರವೇ ಜಿಲ್ಲಾಡಳಿತದಿಂದ ಕಾರ್ಖಾನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೊರಾಟ ಅನಿವಾರ್ಯ ಎನ್ನುತ್ತಾರೆ ಸ್ಥಳೀಯರು.


ಕಲ್ಯಾಣ ಕರ್ನಾಟಕದ ಶರಣರ ನಾಡು ಬೀದರ ಜಿಲ್ಲೆಯ ಪ್ರವಾಸಿ ತಾಣ ವಾಗಿರುವ ಇದು ಒಂದು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ ಮಾಣಿಕನಗರ ಇಲ್ಲಿಗೆ ದಿನಾಲು ಸುಮಾರು ಜನರು ಶ್ರೀ ಮಾಣಿಕ್ ಪ್ರಭುಗಳ ದರ್ಶನ ಪಡೆಯಲು ಎಲ್ಲಾ ಧರ್ಮ, ಮತ್ತು ಎಲ್ಲಾ ಸಮುದಾಯದ ಜನರು ಮಾಣಿಕನಗರಕ್ಕೆ ಬಂದು ಸೇರುತ್ತಾರೆ .ಪ್ರತಿದಿನ ದರ್ಬಾರ್ ಎಂಬ ಸಭೆಯನ್ನು ನಡೆಯುತ್ತದೆ, ಇಲ್ಲಿ ಸಾವಿರಾರು ಜನರು ಭೇಟಿ ನೀಡಿ ಮಾಣಿಕ್ ಪ್ರಭುಗಳ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ರಾಸಾಯನಿಕ ತ್ಯಾಜ್ಯ ಮಿಶ್ರಣ ನೀರಿನ ದುರ್ವಾಸನೆಯಿಂದ ಯಾತ್ರಿಕರಿಗೆ ಅನೇಕ ರೋಗಗಳು ಕೈ ಬೀಸಿ ಕರೆಯುವಂತಾಗಿದೆ.

– ಭಜರಂಗ ತಿವಾರಿ
ರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯ
ರಾಜ್ಯಾಧ್ಯಕ್ಷ


ಈಗಲಾದರೂ ಸ್ಥಳೀಯ ಒಂದೇ ಕುಟುಂಬದ ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು, ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಶಿಸ್ತಿನ ಕ್ರಮ ಕೈಗೊಂಡು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗುತ್ತಾರಾ ಅನ್ನುವುದನ್ನು ಕಾದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group