Homeಸುದ್ದಿಗಳುಸಚಿವ ಶಿವಾನಂದ ಪಾಟೀಲ ಕ್ಷಮೆ ಕೇಳಬೇಕು

ಸಚಿವ ಶಿವಾನಂದ ಪಾಟೀಲ ಕ್ಷಮೆ ಕೇಳಬೇಕು

ಸಿಂದಗಿ: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಕೂಡಲೇ ರೈತರ ಬಳಿ ಕ್ಷಮೆಯಾಚಿಸಬೇಕು ಎಂದು ಕರವೇ ಉ.ಕ ಸಂಚಾಲಕ ಸತೀಶಕುಮಾರ ಕೌಲಗಿ ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾಧ್ಯಮ ಮುಂದೆ ಮಾತನಾಡಿ, ಜವಳಿ ಸಚಿವ ಶಿವಾನಂದ ಪಾಟೀಲ ರೈತರು ಯಾವ ರೀತಿ ಸತ್ತರೂ ಅದನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಪರಿಹಾರಕ್ಕೆ ಸಂಬಂಧಿಕರು ಆಸೆ ಪಡುತ್ತಾರೆ ಎಂಬ ಹೇಳಿಕೆ ಇಡೀ ರಾಜ್ಯದ ರೈತರನ್ನು ಅವಮಾನಿಸಿದಂತಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಕೂಡಲೇ ರೈತರ ಬಳಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

RELATED ARTICLES

Most Popular

error: Content is protected !!
Join WhatsApp Group