spot_img
spot_img

ಗುತ್ತಿ ಬಸವಣ್ಣ ಏತ ನೀರಾವರಿ ಸಮಸ್ಯೆ ಪರಿಹಾರಕ್ಕೆ ಸಚಿವರ ಭರವಸೆ

Must Read

- Advertisement -

ಸಿಂದಗಿ: ಸಿಂದಗಿ ಮತಕ್ಷೇತ್ರದ ತಾಂಬಾ ಭಾಗದ ಸುತ್ತಮುತ್ತಲಿನ ರೈತರ ಬೇಡಿಕೆಯಾಗಿದ್ದ ಗುತ್ತಿ ಬಸವಣ್ಣ ಏತ ನೀರಾವರಿ ಸಮಸ್ಯೆ ಪರಿಹಾರಕ್ಕೆ ಸುಮಾರು 473 ದಿನಗಳಿಂದ ನಡೆದ ಉಪವಾಸ ಸತ್ಯಾಗ್ರಹಕ್ಕೆ ಇಂದು ಬಹುತೇಕ ಅಂತಿಮ ರೂಪ ಸಿಕ್ಕಿದೆ.

ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರಿಗೆ  ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರು ಗುತ್ತಿ ಬಸವಣ್ಣ ಹೋರಾಟ ಸಮಿತಿಯ ರೈತರ ನಿಯೋಗ ಕರೆತಂದು ಸಚಿವರಿಗೆ ಮನವರಿಕೆ ಮಾಡಿದರು.

ಪ್ರತಿಕ್ರಿಯಿಸಿದ ಸಚಿವರು ಶಾಸಕರಾದ ಅಶೋಕ ಮನಗೂಳಿ ಯವರಿಗೆ ಸ್ಥಳಕ್ಕೆ ಭೇಟಿ ನೀಡಿ ರೈತರ ಸತ್ಯಾಗ್ರಹ ಅಂತ್ಯಗೊಳಿಸಲು ಸೂಚಿಸಿದರು. ಬೇಡಿಕೆ ಈಡೇರಿಸುವುದಾಗಿ ಶಾಸಕ ಅಶೋಕ ಮನಗೂಳಿ ಯವರಿಗೆ ಹಾಗೂ ರೈತರಿಗೆ ಸದ್ಯದಲ್ಲೇ ಕಾಡಾ ಗೇಟ ಓಪನ್ ಮಾಡುವ ಮೂಲಕ ಕಾಲುವೆಗೆ ನೀರು ಹರಿಸುವ ಭರವಸೆ ನೀಡಿದರು.

- Advertisement -

ಇದೆ ಸಂದರ್ಭದಲ್ಲಿ ರೈತರಾದ  ಮಲ್ಲಯ್ಯ ಸಾರಂಗಮಠ  (ಗುತ್ತಿ ಬಸವಣ್ಣ ಹೋರಾಟ ಸಮಿತಿ ಅಧ್ಯಕ್ಷರು ), ಸದಸ್ಯರಾದ, ಮಹಾದೇವ ಮೂಲಿಮನಿ, ಅಪ್ಪಣ್ಣ ಕಲ್ಲೂರ, ಸಿದ್ದು ಹತ್ತಳ್ಳಿ, ಸಿದ್ದಪ್ಪ ಕಿಣಗಿ, ಪರಸು ಬಿಸನಾಳ, ಬೀರಪ್ಪ ವಗ್ಗಿ, ಅಡಿವೆಪ್ಪ ರೊಟ್ಟಿ, ಶಾಂತಪ್ಪ ಹಂಚಿನಾಳ, ಬಸವರಾಜ ಉಪ್ಪಿನ, ಬಸವರಾಜ ಅವಟಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಮಲ್ಲಣ್ಣ ಸಾಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಹಾಂತಗೌಡ ಪಾಟೀಲ, ಅರವಿಂದ ಹಂಗರಗಿ, ರಮೇಶ ಭಂಟನೂರ, ಸಂಗನಗೌಡ ಬಿರಾದಾರ, ರಾವುತಗೌಡ ಬಿರಾದಾರ, ಸಿದ್ದನಗೌಡ ಪಾಟೀಲ, ಷಣ್ಮುಖಯ್ಯ ಹಿರೇಮಠ, ಸಂದೀಪ ಚೌರ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group