ರಸ್ತೆ ಕಾಮಗಾರಿಗೆ ಶಾಸಕ ಬಳ್ಳಾರಿ ಚಾಲನೆ

Must Read

ಇಂದು ಬೆಳಿಗ್ಗೆ ದೇವರಗುಡ್ಡ ಗ್ರಾಮದಲ್ಲಿ ರೂ.50.00 ಲಕ್ಷಗಳ ಅನುದಾನದಲ್ಲಿ ದೇವರಗುಡ್ಡ-ಬುಡಪನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ರು ಬಳ್ಳಾರಿ ಚಾಲನೆ ನೀಡಿದರು.

ಸದರಿ ರಸ್ತೆ ಅಭಿವೃದ್ಧಿ ಮಾಡುವ ಕುರಿತು ಬುಡಪನಹಳ್ಳಿ ಮತ್ತು ದೇವರಗುಡ್ಡ ಗ್ರಾಮಗಳ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇದ್ದು. ಇಂದು ಕಾಮಗಾರಿ ಶಂಕು ಸ್ಥಾಪನೆಗೊಳ್ಳುತ್ತಿರುವುದು ರೈತ ಬಾಂಧವರಲ್ಲಿ ಸಂತಸವನ್ನುಂಟು ಮಾಡಿದೆ. ಅಲ್ಲದೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಲತೇಶ ನಾಯರ, ಉಪಾಧ್ಯಕ್ಷರಾದ ಮಾಲಕ್ಕ ಗುಬ್ಬಿ, ಸದಸ್ಯರಾದ ಕರಿಯಪ್ಪ ಉರ್ಮಿ, ಕರಿಯಪ್ಪ ಪಾರಿ, ದೊಡ್ಡಬಿರೇಶ ಗುಡುಗುರ, ಚಂದ್ರು ಉರ್ಮಿ, ಚಂದ್ರು ಜಾಡರ, ತೀರಕಣ್ಣ ಬುಡಪನಹಳ್ಳಿ, ಬುಡಪನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಡಾ. ಹನಮಂತ ಸುಂಕಾಪುರ, ದಿಲ್ಲೆಪ್ಪ ಐಗಳ, ನಾಗಪ್ಪ ಹುಲ್ಲಾಳ, ದುರಗಪ್ಪ ಸಪೂರಿ, ಶಂಭು ಮಾಲದಾರ, ಡಿಳ್ಳೆಪ್ಪ ಸುಂಕಾಪುರ, ಶಿವಣ್ಣ ಹರಮಗಟ್ಟಿ, ರಮೇಶ ಅರಬಗೊಂಡ ಹಾಗೂ AEE ಕಲ್ಲೋಳಿಕರ ಗುತ್ತಿಗೆದಾರರಾದ ನಾಗರಾಜ ಆನ್ವೇರಿ ರವರು ಜೊತೆಗಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group