Homeಲೇಖನಹೋಳಿ ಹಬ್ಬದ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ಮಾಹಿತಿ

ಹೋಳಿ ಹಬ್ಬದ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ಮಾಹಿತಿ

ಪವಿತ್ರವಾದ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿರುವ ಹೋಳಿ ಹಬ್ಬದ ಆಚರಣೆಯ ಹಿಂದೆ ಕೆಲವು ಆಸಕ್ತಿದಾಯ ಸಂಗತಿಗಳು ಅಡಗಿವೆ. ಅವುಗಳೇನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಹೋಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ ವಿಶೇಷ ಕಲಾಕೃತಿಯ ಆಕಾಶ ಬುಟ್ಟಿಗಳು ಹಾಗೂ ಮನೆಯಲ್ಲಿ ನೆಲೆಸುವ ಸಂಭ್ರಮದ ವಾತಾವರಣವು ವಿಶೇಷ ಸಂತೋಷವನ್ನು ನೀಡುತ್ತವೆ.

ವರ್ಣರಂಜಿತವಾದ ಈ ಹಬ್ಬದಲ್ಲಿ ಜನರು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಈ ವಿಭಿನ್ನವಾದ ಹಬ್ಬದ ಆಚರಣೆಯನ್ನು ಭಾರತ ಹಾಗೂ ನೇಪಾಳದಲ್ಲಿ ಮಾತ್ರ ಆಚರಿಸುವುದನ್ನು ಕಾಣಬಹುದು.

ಹೋಳಿ ಹೆಸರಿನ ಮೂಲ:

ಹಿರಣ್ಯ ಕಶಿಪು ಎನ್ನುವ ದುಷ್ಟ ರಾಜನಿಗೆ ವಿಷ್ಣು ಭಕ್ತನಾದ ಪ್ರಹ್ಲಾದ ಎನ್ನುವ ಮಗನಿದ್ದನು. ಅವನು ತಂದೆಯ ಮಾತನ್ನು ಕೆಳದೆ ಸದಾ ಕಾಲ ವಿಷ್ಣುವಿನ ಧ್ಯಾನ ಹಾಗೂ ಆರಾಧನೆಯನ್ನು ಮಾಡುತ್ತಿದ್ದನು. ಮಗನಿಗೆ ವಿಷ್ಣುವಿನ ಧ್ಯಾನ ಮಾಡದಂತೆ ಹಿರಣ್ಯ ಕಶ್ಯಪು ಆಜ್ಞೆಯನ್ನು ಮಾಡಿದನು. ಆದರೆ ಅದ್ಯಾವುದೂ ಸಫಲವಾಗದೆ ಹೋಯಿತು. ನಂತರ ಕೆಲವು ದುಷ್ಕೃತ್ಯವನ್ನು ಮಗನ ವಿರುದ್ಧವಾಗಿ ಮಾಡುವುದರ ಮೂಲಕ ಅವನಿಗೆ ಪಾಠ ಕಲಿಸಲು ಮುಂದಾದನು. ಆಗಲೂ ಸಹ ಯಾವುದೇ ಸಂಗತಿಗಳು ಫಲಕಾರಿಯಾಗಲಿಲ್ಲ. ನಂತರ ತನ್ನ ತಂಗಿ ಹೋಲಿಕಾಳ ಬಳಿ ಹೋದನು.

ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರನ್ನು ಸುಡುವ ಶಕ್ತಿಯನ್ನು ಪಡೆದುಕೊಂಡಿದ್ದಳು.

ಹಾಗಾಗಿ ಪ್ರಹ್ಲಾದನನ್ನು ಸಹ ತನ್ನ ತೊಡೆಯ ಮೇಲೆ ಕುಳಿಸಿಕೊಳ್ಳಲು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡನು. ಆದರೆ ಪ್ರಹ್ಲಾದ ಹರಿಯ ಸ್ಮರಣೆಯನ್ನು ಮಾಡುತ್ತಲೇ ಇದ್ದುದರಿಂದ ಹೋಲಿಕಾ ಸುಟ್ಟು ಭಸ್ಮವಾದಳು. ಪ್ರಹ್ಲಾದ ಬೆಂಕಿಯಿಂದ ಹೊರಗೆ ಬಂದನು ಎಂದು ಹೇಳಲಾಗುವುದು. ಹೋಲಿಕಾಳ ದಹನದ ಹಿನ್ನೆಲೆಯಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಲಾಯಿತು. ಹಬ್ಬಕ್ಕೆ ಹೋಳಿ ಎನ್ನುವ ಹೆಸರು ಬಂತು ಎಂದು ಧಾರ್ಮಿಕ ಕತೆಯು ತಿಳಿಸುತ್ತದೆ.

ಸತ್ಯಕ್ಕೆ ಎಂದೂ ಸಲ್ಲುವ ಜಯ:

ಈ ಹಬ್ಬವನ್ನು ಅಜ್ಞಾನ, ಕೆಟ್ಟ ಸಂಗತಿ ಹಾಗೂ ಸುಳ್ಳಿನ ವಿರುದ್ಧವಾಗಿ ಸತ್ಯ, ಧರ್ಮ ಮತ್ತು ಉತ್ತಮ ಸಂಗತಿಯು ಸಾಧಿಸಿದ ಜಯ ಎಂದು ಪರಿಗಣಿಸಲಾಗುವುದು. ನೇಪಾಳದ ಜನರು ಹೋಳಿ ಹಬ್ಬವು ಒಳ್ಳೆಯ ಚಿಂತನೆಗಳಿಗೆ ಹಾಗೂ ವಿಷಯಕ್ಕೆ ಸಂದ ಜಯದ ಸಂಭ್ರಮ ಎಂದು ಆಚರಿಸುತ್ತಾರೆ. ನೇಪಾಳಿಯನ್ನರು ಹೋಳಿ ಹಬ್ಬವನ್ನು ಆಚರಿಸಿದ ಮರುದಿನ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.

ಪೂತನಿಯ ಸಂಹಾರ:

ಶ್ರೀಕೃಷ್ಣ ದೇವನು ಶಿಶುವಾಗಿರುವಾಗ ಕಂಸ ರಾಜನು ಪೂತನಿಯನ್ನು ಸಾಯಿಸಲು ಕಳುಹಿಸಿದ್ದನು. ಆಗ ಬಾಲ ಕೃಷ್ಣನು ರಾಕ್ಷಸಿಯ ಹಾಲಿನೊಂದಿಗೆ ರಕ್ತವನ್ನು ಹೀರಿದನು. ಆದ್ದರಿಂದಲೇ ಕೃಷ್ಣನ ಮೈಬಣ್ಣವು ನೀಲಿ ಬಣ್ಣಕ್ಕೆ ತಿರುಗಿತು. ನಂತರ ಪೂತನಿ ರಾಕ್ಷಸಿಯ ಸಂಹಾರವನ್ನು ಮಾಡಿದನು. ರಾಧೆಯು ಕೃಷ್ಣನ ಮೈಬಣ್ಣ ಬದಲಾಗಿರುವುದಕ್ಕೆ ಚಿಂತಿಸದೆ ಅವನ ಪ್ರೀತಿಯನ್ನು ಗೌರವಿಸಿದಳು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಹೋಳಿ ಹಬ್ಬದ ಆಚರಣೆ ಮಾಡಲಾಯಿತು ಎಂದು ಹೇಳಲಾಗುವುದು.

ದೀಪದ ಮುಂದೆ ಪ್ರಾರ್ಥನೆ:

ಹೋಳಿ ಹಬ್ಬದ ಹಿಂದಿನ ದಿನ ಜನರು ದೀಪೋತ್ಸವವನ್ನು ಆಚರಿಸುತ್ತಾರೆ. ಆ ದೀಪೋತ್ಸವದ ಸುತ್ತಲೂ ಎಲ್ಲರೂ ಒಟ್ಟುಗೂಡಿ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ದೇವರಲ್ಲಿ ತಪ್ಪು ಹಾಗೂ ದುಷ್ಟ ತನವನ್ನು ತೊಡೆದುಹಾಕುವಂತೆ ಕೇಳುವರು. ತಮ್ಮ ತಪ್ಪುಗಳಿಗೆ ಕ್ಷಮಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ನಂತರ ಹೋಲಿಕಾ ದಹನ ಕ್ರಮವನ್ನು ಆಚರಿಸುತ್ತಾರೆ. ನೇಪಾಳದಲ್ಲಿ ಈ ವಿಧಿ-ವಿಧಾನವು ಹೋಳಿ ಹಬ್ಬದಲ್ಲಿ ಸಾಮಾನ್ಯವಾದದ್ದು.

ಸಮಾನತೆಯ ಹಬ್ಬ:

ಜಾತಿ, ಧರ್ಮ, ಮೇಲು, ಕೀಳು, ದೊಡ್ಡವರು, ಚಿಕ್ಕವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಬಣ್ಣವನ್ನು ಬಳಿಯುವುದು, ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಆಚರಣೆಯನ್ನು ಕೈಗೊಳ್ಳುತ್ತಾರೆ. ಈ ಹಬ್ಬವು ಎಲ್ಲರ ನಡುವೆ ಇರುವ ಅಹಂ ಹಾಗೂ ಸೊಕ್ಕಿನ ಭಾವನೆಯನ್ನು ತೊರೆದು ಬೆರೆತು ಬಾಳುವ ಸಂದೇಶವನ್ನು ನೀಡುವುದು. ಎಲ್ಲರೊಂದಿಗೂ ಬೆರೆತಾಗ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ ಎನ್ನುವುದನ್ನು ಹೋಳಿ ಹಬ್ಬ ತೋರಿಸಿಕೊಡುವುದು.

ಭಾಂಗ್ ಪಾನೀಯ:

ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಭಾಂಗ್ ಪಾನೀಯವನ್ನು ಕುಡಿಯುವುದು ಸಾಮಾನ್ಯವಾದ ಸಂಗತಿಯಾಗಿದೆ. ಈ ಪಾನೀಯವನ್ನು ಕುಡಿಯುವುದರಿಂದ ವ್ಯಕ್ತಿ ಒಂದು ರೀತಿಯ ಗುಂಗಿಗೆ ಒಳಗಾಗುತ್ತಾನೆ. ಆಗ ವ್ಯಕ್ತಿಯಲ್ಲಿ ಎಲ್ಲಾ ರೀತಿಯ ನಿರ್ಬಂಧಗಳು ಮರೆಯಾಗುತ್ತವೆ. ದ್ವೇಷಗಳನ್ನು ಮರೆಸಿ, ಉತ್ಸಾಹವನ್ನು ಹೆಚ್ಚಿಸುವುದು. ಹಾಗಾಗಿ ಹಬ್ಬದ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಭಾಂಗ್ ಎಲೆಯ ರಸವನ್ನು ಕುಡಿದು ಹಬ್ಬವನ್ನು ಆಚರಿಸುತ್ತಾರೆ.

ಕಾಠ್ಮಂಡು ನಗರದಲ್ಲಿ ಹೋಳಿ:

ಕಾಠ್ಮಂಡು ನಗರದಲ್ಲಿ ಹೋಳಿ ಹಬ್ಬದ ಒಂದು ವಾರ ಮೊದಲು ವರ್ಣ ರಂಜಿತ ಬಟ್ಟೆಯನ್ನು ಧರಿಸಿ, ಬಿದಿರಿನ ಗಳ ಅಥವಾ ಬಿದಿರನ್ನು ಬಳಸಿ ಹನುಮಂತನ ದೇವಾಲಯವನ್ನು ನಿರ್ಮಿಸುತ್ತಾರೆ. ಹೋಳಿಯ ಹಿಂದಿನ ದಿನದಂದು ಅವುಗಳನ್ನು ತೆಗೆದು ಹೋಲಿಕಾಳ ದಹನವನ್ನು ಮಾಡುವುದರ ಮೂಲಕ ದುಷ್ಟ ಹೋಲಿಕಾಳನ್ನು ಸುಡುತ್ತಾರೆ. ನಂತರ ಹೋಳಿ ಹಬ್ಬವನ್ನು ಆಚರಿಸುವರು.

16 ದಿನಗಳ ಕಾಲ ಹೋಳಿ ಆಚರಣೆ:

ಕಾಠ್ಮಂಡುವಿನಲ್ಲಿ ಹೋಳಿ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣದ ನೀರನ್ನು ತುಂಬಿದ ಪಿಚಕಾರಿ, ನೀರಿನ ಬಲೂನು, ವಿವಿಧ ಬಣ್ಣಗಳಿಂದ ಕೂಡಿದ ಬಿದಿರಿನ ಕಡ್ಡಿಗಳ ಅಲಂಕಾರವನ್ನು ಹನುಮಂತನ ದೇವಾಲಯಕ್ಕೆ ಮಾಡುತ್ತಾರೆ. ಇದು ಹಬ್ಬದ ಆರಂಭವನ್ನು ಸೂಚಿಸುವುದು. ಇಲ್ಲಿ ಒಂದು ವಾರ ಮುಂಚಿತವಾಗಿಯೇ ಬಣ್ಣದ ನೀರಿನ ಸಿಂಚನಗಳು ಸಾಮಾನ್ಯವಾಗಿ ಇರುತ್ತವೆ.

ಹಿಂದೂ ಧರ್ಮದಲ್ಲಿ ಹೋಳಿಯ ಆಚರಣೆಯು 16 ದಿನಗಳ ಕಾಲ ವಿಶೇಷ ಆಚರಣೆಯನ್ನು ಸೂಚಿಸುತ್ತದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಬ್ಬಕ್ಕೂ ಮುಂಚೆ 16 ದಿನಗಳ ಕಾಲ ವಿಶೇಷ ಅಲಂಕಾರ, ವೇಷ-ಭೂಷಣದಲ್ಲಿ ಮನೆ ಮನೆಗೆ ಹೋಗಿ ನೃತ್ಯವನ್ನು ಮಾಡುತ್ತಾರೆ. ಹಬ್ಬದ ದಿನ ಆ ಬಣ್ಣಗಳನ್ನು ತೆಗೆದು ಕಾಮದೇವನನ್ನು ದಹಿಸುವುದರ ಮೂಲಕ ಹಬ್ಬವನ್ನು ಆಚರಿಸುವರು.

ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ:

ಫಾಲ್ಗುಣ ಮಾಸದ (ಫೆಬ್ರವರಿ ಅಥವಾ ಮಾರ್ಚ್ ನಡುವೆ ಬರುವ ಸಮಯ) ಹುಣ್ಣಿಮೆಯಂದು ಹೋಳಿಯನ್ನು ಆಚರಿಸಲಾಗುವುದು. ಈ ಹಬ್ಬದ ಉತ್ಸವವು ವಸಂತ ಕಾಲದ ಆರಂಭವನ್ನು ಹಾಗೂ ದೀರ್ಘ ಕಾಲದ ಚಳಿಯ ಅಂತ್ಯವನ್ನು ಸೂಚಿಸುತ್ತದೆ.

ವಿವಿಧೆಡೆಯಲ್ಲಿ ಆಚರಣೆ:

ಹೋಳಿ ಹಬ್ಬವನ್ನು ಸಾಮಾನ್ಯವಾಗಿ ನೇಪಾಳ ಮತ್ತು ಭಾರತೀಯರು ಮಾತ್ರ ಆಚರಿಸುತ್ತಿದ್ದರು. ಈ ಪ್ರದೇಶದಿಂದ ಹೋಗಿ ಇತರೆಡೆ ನೆಲೆಸಿರುವ ಜನಗಳು ಹಾಗೂ ಹಿಂದೂ ಸಂಸ್ಕೃತಿ ಹಾಗೂ ಆಚರಣೆಯನ್ನು ಅರಿತ ಜನರು ಸಹ ವಿವಿಧ ಪ್ರದೇಶದಲ್ಲಿ ಹೋಳಿ ಹಬ್ಬದ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ಇಂದು ಬಾರ್ಸಿಲೋನ್, ಮಾರಿಷನ್, ಫಿಜಿ, ಗಯಾನಾ, ಟ್ರಿನಿಟಾಡ್ ಮತ್ತು ಟೊಬಾಗೊ, ಫಿಲಿಪೈನ್, ಯುಎಸ್‍ಎ ಮತ್ತು ಯುಕೆಗಳಂತಹ ಪ್ರಮುಖ ದೇಶಗಳಲ್ಲಿಯೂ ಆಚರಿಸುತ್ತಾರೆ.

RELATED ARTICLES

Most Popular

error: Content is protected !!
Join WhatsApp Group