spot_img
spot_img

ಮೂಡಲಗಿ ಶ್ರೀ ಶಿವಬೋಧರಂಗ ಸೊಸಾಯಟಿಗೆ ರೂ.5.70 ಕೋಟಿ ಲಾಭ 

Must Read

ಮೂಡಲಗಿ- ಸ್ಥಳೀಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶ್ರೀ
ಶಿವಬೋಧರಂಗ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಟಿಯು ಕಳೆದ ಮಾರ್ಚ ಅಂತ್ಯಕ್ಕೆ 5.70 ಕೋಟಿ ರೂ ಲಾಭ ಗಳಿಸಿ ಶೇರುದಾರರ ಮತ್ತು ಸಾರ್ವಜನಿಕರ ಮನದಾಳದಲ್ಲಿದೆ ಎಂದು ಸೊಸಾಯಟಿಯ ಅಧ್ಯಕ್ಷರಾದ
ಬಸವರಾಜ ವ್ಹಿ. ಗುಲಗಾಜಂಬಗಿ ಹೇಳಿದರು.
    ಅವರು ಸ್ಥಳೀಯ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್.ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಟಿ ಮೂಡಲಗಿ ಇದರ
29 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಹಾಕುವದರ ಮೂಲಕ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸೊಸಾಯಟಿಯು ಕಳೆದ ಮಾರ್ಚ ಅಂತ್ಯಕ್ಕೆ 15,814 ಸದಸ್ಯರನ್ನು ಹೊಂದಿ ಸಾರ್ವಜನಿಕರಿಂದ
341 ಕೋಟಿ ರೂ ಠೇವು ಸಂಗ್ರಹಿಸಿ ತನ್ನ ಶೇರುದಾರರಿಗೆ 191 ಕೋಟಿ ರೂ. ಕ್ಕಿಂತ ಅಧಿಕ ಸಾಲ ನೀಡಿ 393 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ 1335 ಕೋಟಿ ರೂ ಕ್ಕಿಂತ ಅಧಿಕ ವಾರ್ಷಿಕ ವಹಿವಾಟು ಮಾಡಿರುವದಕ್ಕೆ ಸಂಘದ
ಸರ್ವ ಸದಸ್ಯರಿಗೂ ವ್ಯಾಪಾರಿ ವರ್ಗದವರಿಗೂ ರೈತ ವರ್ಗದವರಿಗೂ ಆಡಳಿತ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಮಮದಾಪೂರ ಶಾಖೆಯ ಅಧ್ಯಕ್ಷರಾದ ಮಹಾದೇವ ಗಾಣಗಿ ಮಾತನಾಡಿ, ಸಾಲಗರರು ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿದರೆ ಮಾತ್ರ ಸೊಸಾಯಿಟಿಯು ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯ
ಎಂದರು.
    ರಬಕವಿ ಶಾಖೆಯ ಸಲಹಾ ಸಮಿತಿಯ ಸದಸ್ಯರಾದ ಶಿವಾನಂದ ದಾಶಾಳ ಮಾತನಾಡಿ, ಸೊಸಾಯಿಟಿಯು ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಮಾತ್ರ ಹೆಸರು
ಗಳಿಸದೇ ರಾಜ್ಯದಲ್ಲಿಯೂ ತನ್ನ ಹೆಸರು ಪಸರಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
    ಸರ್ವ ಸಾಧಾರಣ ಸಭೆಯಲ್ಲಿ ಸೊಸಾಯಟಿಯ ಉಪಾಧ್ಯಕ್ಷರಾದ ಸುಭಾಸ ಆರ್   ಸೋನವಾಲ್ಕರ,  ನಿರ್ದೇಶಕರಾದ ರವೀಂದ್ರ ಪಾಂಡಪ್ಪ ಸೋನವಾಲ್ಕರ,
ಪುಲಕೇಶ ಆರ್ ಸೋನವಾಲ್ಕರ, ಅಶೋಕ ಎಮ್ ಹೊಸೂರ, ಡಾ. ಶಂಕರ ಎಸ್ ದಂಡಪ್ಪನವರ, ರೇವಪ್ಪ ಕೆ.ಕುರಬಗಟ್ಟಿ, ವಿದ್ಯಾವತಿ ರವೀಂದ್ರ ಸೋನವಾಲ್ಕರ, ಶಾರದಾ ಬಸವರಾಜ ಗುಲಗಾಜಂಬಗಿ, ಮಂಜುಳಾ ಶಿವಶಂಕರ
ಬಳಿಗಾರ, ಗಂಗವ್ವಾ ಕೆ. ಸಣ್ಣಪ್ಪನ್ನವರ, ಹಣಮಂತ ಎಸ್ ಸಣ್ಣಕ್ಕಿ ಹಾಗೂ ೧೮ ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಅನೇಕರು ಉಪಸ್ಥಿತರಿದ್ದರು.
   ಪ್ರಧಾನ ವ್ಯವಸ್ಥಾಪಕರಾದ ಸುರೇಶ ಬಿ. ನಾಶಿ ಕ್ರೋಡಿಕೃತ ಅಢಾವೆ ಪತ್ರಿಕೆ ಓದಿದರು.  ಜಮಖಂಡಿ ಶಾಖಾ ವ್ಯವಸ್ಥಾಪಕ ಅಶೋಕ ಹೊಸಟ್ಟಿ ಲಾಭ-ಹಾನಿ ಪತ್ರಿಕೆ, ಸಾವಳಗಿ ಶಾಖಾ ವ್ಯವಸ್ಥಾಪಕ ಆಶೀಫ ದೇಸಾಯಿ ಲಾಭ ವಿಂಗಡಣೆ ಮತ್ತು ಹಣಮಂತ ಕುಂಬಾರ ಅಂದಾಜು ಲಾಭ-ಹಾನಿ
ಪತ್ರಿಕೆಯನ್ನು ಓದಿದರು.ಗುರ್ಲಾಪೂರ ಶಾಖೆಯ ಮ್ಯಾನೇಜರ ವೆಂಕಟೇಶ ಬಾಲರಡ್ಡಿ, ಸ್ವಾಗತಿಸಿ,ವರದಿ ವಾಚನ ಮಾಡಿ, ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ನನ್ನ ಸಂವಿಧಾನ-ನನ್ನ ಹೆಮ್ಮೆ ಪುಸ್ತಕ ಬಿಡುಗಡೆ ಸಮಾರಂಭ 

     ಮೂಡಲಗಿ -  ಅಂತಾರಾಷ್ಟ್ರೀಯ  ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಇಷ್ಟಾ ಅಪಾರ್ಟ್ ಮೆಂಟ್ನಲ್ಲಿ ಮೂಡಲಗಿಯ ಜ್ಞಾನದೀಪ್ತಿ  ಫೌಂಡೇಶನ್ ಇವರ ವತಿಯಿಂದ ನಡೆದ ಸಮಾರಂಭದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group