spot_img
spot_img

ಬಿಜೆಪಿ ಅಭ್ಯರ್ಥಿಗೆ ಚಂದಾ ನೀಡಿದ ಮುಸ್ಲಿಮ್ ಮಹಿಳೆಯರು

Must Read

- Advertisement -

ಬೀದರ: ಬೀದರನಲ್ಲೊಂದು ಅಪರೂಪದ ಘಟನೆ ನಡೆದಿದೆ. ಮುಸ್ಲಿಮ್ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕಂತೂ ಚಾಟಿಯೇಟು ನೀಡಯವಂಥ ಘಟನೆ ಇದಾಗಿದ್ದು ಮಾತೆತ್ತಿದರೆ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲಾಗದು.

ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನದಿಂದ ಮುಸ್ಲಿಂ ಮಹಿಳೆಯರು ಬೀದರ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆಯವರಿಗೆ ಚುನಾವಣೆ ಗೆ  ಚಂದಾ ಹಣ ನೀಡಿದ್ದಾರೆ.

ಪ್ರಕಾಶ್ ಖಂಡ್ರೆ ಗೆಲ್ಲಬೇಕು. ಈಶ್ವರ ಖಂಡ್ರೆ ಸೋಲಬೇಕು. ಬಿಜೆಪಿಯಿಂದ ಮಾತ್ರ ಮುಸ್ಲಿಂ ಮಹಿಳೆಯರಿಗೆ ನೆಮ್ಮದಿ ಸಾಧ್ಯ ಎನ್ನುತ್ತ ಬಿಜೆಪಿ ಅಭ್ಯರ್ಥಿಗೆ 51 ಸಾವಿರ ರೂ. ದೇಣಿಗೆ ನೀಡಲು ಬಂದ ಮುಸ್ಲಿಂ ಮಹಿಳೆಯರು ವಿಧಾನಸಭಾ ಚುನಾವಣೆಯ ಖರ್ಚಿಗೆ ಬಿಜೆಪಿ ಅಭ್ಯರ್ಥಿಗೆ ಬಡ ಮಹಿಳೆಯರಿಂದ ದೇಣಿಗೆ ನೀಡಿ ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟ ಮುಸ್ಲಿಂ ಸಮುದಾಯದ ಮಹಿಳೆಯರು ಚುನಾವಣೆ ಖರ್ಚಿಗೆ ಹಣ ನೀಡಿ ಸನ್ಮಾನಿಸಿ ಈ ಭಾರಿ ಕಾಂಗ್ರೆಸ್ ಪಕ್ಷವನ್ನಹ ಸೋಲಿಸಬೇಕೆಂದು ಶುಭ ಕೋರಿದರು. ಸಂಘದಲ್ಲಿ ಸಾಲ ತೆಗೆದುಕೊಂಡ 51 ಸಾವಿರ ರೂ. ಗಳನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ ಮುಸ್ಲಿಂ ಮಹಿಳೆಯರು ಎಂಬುದು ವಿಶೇಷ.

- Advertisement -

ಆದರೆ ಮುಸ್ಲಿಮ್ ಮಹಿಳೆಯರು ತಂದ ಹಣ ಸ್ವೀಕರಿಸದೇ  ಕೇವಲ ಮುಸ್ಲಿಮರು ನನ್ನನ್ನು  ಬೆಂಬಲಿಸಿದರೆ ಸಾಕು ಎಂದ ಪ್ರಕಾಶ್ ಖಂಡ್ರೆ ವಿನಯ ವ್ಯಕ್ತಪಡಿಸಿದರು.

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group