ಬಿಜೆಪಿ ಅಭ್ಯರ್ಥಿಗೆ ಚಂದಾ ನೀಡಿದ ಮುಸ್ಲಿಮ್ ಮಹಿಳೆಯರು

Must Read

ಬೀದರ: ಬೀದರನಲ್ಲೊಂದು ಅಪರೂಪದ ಘಟನೆ ನಡೆದಿದೆ. ಮುಸ್ಲಿಮ್ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕಂತೂ ಚಾಟಿಯೇಟು ನೀಡಯವಂಥ ಘಟನೆ ಇದಾಗಿದ್ದು ಮಾತೆತ್ತಿದರೆ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲಾಗದು.

ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನದಿಂದ ಮುಸ್ಲಿಂ ಮಹಿಳೆಯರು ಬೀದರ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆಯವರಿಗೆ ಚುನಾವಣೆ ಗೆ  ಚಂದಾ ಹಣ ನೀಡಿದ್ದಾರೆ.

ಪ್ರಕಾಶ್ ಖಂಡ್ರೆ ಗೆಲ್ಲಬೇಕು. ಈಶ್ವರ ಖಂಡ್ರೆ ಸೋಲಬೇಕು. ಬಿಜೆಪಿಯಿಂದ ಮಾತ್ರ ಮುಸ್ಲಿಂ ಮಹಿಳೆಯರಿಗೆ ನೆಮ್ಮದಿ ಸಾಧ್ಯ ಎನ್ನುತ್ತ ಬಿಜೆಪಿ ಅಭ್ಯರ್ಥಿಗೆ 51 ಸಾವಿರ ರೂ. ದೇಣಿಗೆ ನೀಡಲು ಬಂದ ಮುಸ್ಲಿಂ ಮಹಿಳೆಯರು ವಿಧಾನಸಭಾ ಚುನಾವಣೆಯ ಖರ್ಚಿಗೆ ಬಿಜೆಪಿ ಅಭ್ಯರ್ಥಿಗೆ ಬಡ ಮಹಿಳೆಯರಿಂದ ದೇಣಿಗೆ ನೀಡಿ ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಕೊಟ್ಟ ಮುಸ್ಲಿಂ ಸಮುದಾಯದ ಮಹಿಳೆಯರು ಚುನಾವಣೆ ಖರ್ಚಿಗೆ ಹಣ ನೀಡಿ ಸನ್ಮಾನಿಸಿ ಈ ಭಾರಿ ಕಾಂಗ್ರೆಸ್ ಪಕ್ಷವನ್ನಹ ಸೋಲಿಸಬೇಕೆಂದು ಶುಭ ಕೋರಿದರು. ಸಂಘದಲ್ಲಿ ಸಾಲ ತೆಗೆದುಕೊಂಡ 51 ಸಾವಿರ ರೂ. ಗಳನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ ಮುಸ್ಲಿಂ ಮಹಿಳೆಯರು ಎಂಬುದು ವಿಶೇಷ.

ಆದರೆ ಮುಸ್ಲಿಮ್ ಮಹಿಳೆಯರು ತಂದ ಹಣ ಸ್ವೀಕರಿಸದೇ  ಕೇವಲ ಮುಸ್ಲಿಮರು ನನ್ನನ್ನು  ಬೆಂಬಲಿಸಿದರೆ ಸಾಕು ಎಂದ ಪ್ರಕಾಶ್ ಖಂಡ್ರೆ ವಿನಯ ವ್ಯಕ್ತಪಡಿಸಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group