ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಭೂಕಂಪನದ ಅನುಭವವಾಗಿದ್ದು ಜನರು ಮನೆಯಿಂದ ಹೊರಗೆ ಓಡಿ ಬಂದು ನಿಂತ ಘಟನೆ ನಡೆದಿದೆ
ಹುಮನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಮೂರು ಭಾರಿ ಭೂಮಿಯಿಂದ ನಿಗೂಢ ಶಬ್ದ ಕೇಳಿ ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಸಂಜೆ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿ ಬರುತ್ತಿದ್ದಂತೆ ಗ್ರಾಮಸ್ಥರು ಮನೆಯಿಂದ ಓಡಿ ಹೊರ ಬಂದಿದ್ದಾರೆ. ರಸ್ತೆಗೆ ಬಂದ ಗ್ರಾಮಸ್ಥರು ಭೂಮಿ ನಡುಗಿದ ಅನುಭವಾಯಿತು ಎಂದು ಹೇಳಿಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಭೂಮಿಯಿಂದ ಶಬ್ದಗಳು ಕೇಳಿಬಂದಿದೆಯೆಂಬುದಾಗಿ ಗ್ರಾಮದ ಬಹುತೇಕ ಜನರು ಹೇಳಿದ್ದಾರೆ.
ಕೋಡಂಬಲ್ ಗ್ರಾಮದ ಜನರು ಭಯಭೀತರಾಗಿದ್ದು, ಮಾಹಿತಿ ಲಭ್ಯವಾದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿದ ಚಿಟಗುಪ್ಪ ಪಿಎಸ್ಐ ಮಹೇಂದ್ರಕುಮಾರ ಗ್ರಾಮಸ್ಥರಿಂದ ಮಾಹಿತಿ ಪಡೆದು, ಗ್ರಾಮಸ್ಥರು ಯಾವುದಕ್ಕೂ ಭಯ ಬೀಳಬಾರದು ಎಂದು ಹೇಳಿ ಜನರಿಗೆ ಧೈರ್ಯ ತುಂಬಿದರು..
ವರದಿ : ನಂದಕುಮಾರ ಕರಂಜೆ, ಬೀದರ