Homeಸುದ್ದಿಗಳುಕಾಂಗ್ರೆಸ್ ಗ್ಯಾರಂಟಿ ವಿವರಿಸಿದ ನಾಗರತ್ನಾ ಮನಗೂಳಿ

ಕಾಂಗ್ರೆಸ್ ಗ್ಯಾರಂಟಿ ವಿವರಿಸಿದ ನಾಗರತ್ನಾ ಮನಗೂಳಿ

ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ಪಾರದರ್ಶಕ ಮತ್ತು ಜನಪರ ಯೋಜನೆಗಳನ್ನು ರೂಪಿಸಿ ಭ್ರಷಾಚಾರ ರಹಿತ ಆಡಳಿತ ನಡೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕಿದೆ ಕಾರಣ 2023ರ ಚುನಾವಣೆಯಲ್ಲಿ ಜನಪರ ಯೋಜನೆಗಳನ್ನು ರೂಪಿಸಲು ಪ್ರಣಾಳಿಕೆ ರಚಿಸಿದ್ದು ನುಡಿದಂತೆ ನಡೆದುಕೊಳ್ಳುವ ಪಕ್ಷವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪತ್ನಿ ನಾಗರತ್ನಾ ಮನಗೂಳಿ ಹೇಳಿದರು.

ಪಟ್ಟಣದ 13,14ನೇ ವಾರ್ಡಿನಲ್ಲಿ ಅವರು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿಯ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ಬಗ್ಗೆ ವಿವರಿಸುತ್ತ ಮತಯಾಚಿಸಿ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿಯ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಪಕ್ಷದ ಮುಖಂಡರಾದ  ಬಸು ಕಾಂಬಳೆ, ರವಿಗೌಡ ಬಿರಾದಾರ, ಮಲ್ಲು ಸದುಗೋಳ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group