spot_img
spot_img

“ನಲಿ ಕಲಿ ಶಿಕ್ಷಕರ ಸಭೆ”

Must Read

spot_img
- Advertisement -

ಸಿಂದಗಿ; ಕೊವಿಡ್19 ರಿಂದ ನಲಿಕಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಗ ಕುಂಠಿತವಾಗಿದೆ ಆದರಿಂದ ವಿದ್ಯಾರ್ಥಿಗಳಿಗೆ ನಲಿ ಕಲಿ ಪದ್ದತಿ ಮೂಲಕ ಅವರಿಗೆ ದೈನಂದಿನ ಚಟುವಟಿಕೆ ಮುಖಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕು ಎಂದು

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ಪಟ್ಟಣ ಬಿ ಆರ್ ಸಿ ಕೇಂದ್ರದಲ್ಲಿ ತಾಲೂಕಿನ ನಲಿ ಕಲಿ ಶಿಕ್ಷಕರಿಗೆ ಒಂದು ದಿನ ಸಮಾಲೋಚನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಲಿ ಕಲಿ ಪದ್ದತಿ ಮುಖಾಂತರವಾಗಿ ಶಿಕ್ಷಣ ಕೊಡುವದರಿಂದ ಕಲಿಕೆಯಲ್ಲಿ ವಿದ್ಯಾರ್ಥಿಯು ಹಿಂದೆ ಬೀಳದೆ ಉತ್ತಮ ಶಿಕ್ಷಣ ಪಡೆಯುತ್ತದೆ ಎಂದರು.

- Advertisement -

ನಲಿ ಕಲಿ ಸಂಯೋಜಕಿ ಶ್ರೀಮತಿ ಶ್ರೀದೇವಿ ರೆಬಿನಾಳ ಹಾಗೂ ಕನ್ನೋಳ್ಳಿ ವಲಯದ ಸಿ ಆರ್ ಪಿ ಭೀಮನಗೌಡ ಬಿರಾದಾರ ಮಾತನಾಡಿ ವಿದ್ಯಾರ್ಥಿಗಳಿಗೆ ಪಾಲಕರ ಸಹಕಾರ ಮೂಲಕ ತಂತ್ರ ಜ್ಞಾನ ಬಳಸಿಕೊಂಡು ನಲಿ ಕಲಿ ಪದ್ದತಿ ಮೂಲಕ ಅವರಿಗೆ ಶಿಕ್ಷಣ ಕೊಡಬೇಕು ಎಂದರು.

ತರಬೇತಿ ದಾರ ಜಗದೀಶ ಪಾಟೀಲ ನಲಿ ಕಲಿ ವಿದ್ಯಾರ್ಥಿಗಳಿಗೆ ಯಾವ ಪ್ರಕಾರವಾಗಿ ಶಿಕ್ಷಣ ಕೊಡಬೇಕು ಎಂದು ನಲಿ ಕಲಿ ಕಲಿಸುವ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಬಿ ಆರ್ ಪಿ ಎಂ ಎಂ ದೊಡಮನಿ,ರೇಖಾ ಬಿಜ್ಜರಗಿ, ಅನಸೂಯಾ ರಾಯನಗೌಡ, ಬಸವರಾಜ ಸೋಮಪೂರ,ಬಸವರಾಜ ಅಗಸರ,ನಿಂಗನಗೌಡ ಪಾಟೀಲ,ಎಸ್ ಜಿ ಹಿರೇಮಠ,ಶರಣಗೌಡ ಜೇವರಗಿ, ಸುಮಂಗಲಾ ಕೆಂಭಾವಿ,ಸವಿತಾ ಕೆಂಭಾವಿ, ಮಾದೇವಿ ಬಾಗಿ, ಅನೀಲಕುಮಾರ ಚೊರಗಸ್ತಿ,ಯು.ಐ.ಶೇಖ, ಈರಮ್ಮ ಮುತ್ತಿನಪೆಂಟಿನಮಠ,ಎಂ ಬಿ ಕೋರವಾರ,ಆಲಮೇಲ ಸರ್,ಸಿದ್ದಮ್ಮ ಪಾಟೀಲ,ಸುರೇಖಾ ಪೂಜಾರ,ಬಸಮ್ಮಬಜಂತ್ರಿ ಹಾಗೂ ತಾಲೂಕಿನ ವಿವಿಧ ನಲಿಕಲಿ ಶಿಕ್ಷಕರು ಭಾಗವಹಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group