ಕವನ: ದಿಕ್ಕಾರ… ಧಿಕ್ಕಾರ…

Must Read

ದಿಕ್ಕಾರ… ಧಿಕ್ಕಾರ…

ಹಚ್ಚಬೇಡಿ ಬೆಂಕಿಯ ಮಾನವೀಯತೆಗೆ,
ಜಾತಿ,ಧರ್ಮ, ಭಾಷೆಯ ಹೆಸರಲಿ
ಹಚ್ಚಬೇಡಿ ಬೆಂಕಿಯ
ಸಹೋದರರ ನಡುವೆ,
ಒಂದೇ ದೇಶ, ಒಂದೇ ರಕ್ತ,
ಒಂದೇ ಮಾನವೀಯ ಸದ್ಗುಣ,
ಒಂದೇ ಮಾನವ ಜನ್ಮ ಇರುವ ಈ ಮಾನವ ಜನ್ಮಕೆ,
ಜಾತಿ,ಧರ್ಮ, ಭಾಷೆ,ಪ್ರಾದೇಶಿಕತೆ ಹೆಸರಲಿ
ಕೊಳ್ಳಿ ಇಡುತ್ತಿರುವ ನಿಮಗೆ
ಸಾವಿರ,ಸಾವಿರ ಧಿಕ್ಕಾರ..

ಇಟ್ಟು ಬಿಡಿ ಕೊಳ್ಳಿಯ
ನಿಮ್ಮ ಸಣ್ಣ ತನಕೆ,
ನಿಮ್ಮ ಮೃಗೀಯ ವರ್ತನೆಗೆ,
ಮಾನವ-ಮಾನವರ ನಡುವೆ
ಭಾಷೆಯ ಹೆಸರಲಿ ಬಿರುಕು ಮೂಡಿಸುವ
ನಿಮ್ಮ ರಾಕ್ಷಸ ತನಕೆ,ಮೃಗೀಯ ವರ್ತನೆಗೆ…

ನೂರು ಜಾತಿಗಳಿದ್ದರೂ,
ಹತ್ತಾರು ಧರ್ಮಗಳಿದ್ದರೂ,
ಅಸಂಖ್ಯಾತ ಭಾಷೆಗಳಿದ್ದರೂ
ನಮ್ಮ ತಾಯಿ ಭಾರತಮಾತೆ ಒಬ್ಬಳೇ..
ಭಾರತಮಾತೆ ಎಲ್ಲರಿಗೂ ಭಾಗ್ಯವಿಧಾತೆ ,
ಅವಳಿಗಿಲ್ಲ ಜಾತಿ,ಧರ್ಮ, ಭಾಷೆಗಳ ಬೇಧ !!
ಅಧಿಕಾರ ಹಿಡಿಯಲು ಕುತಂತ್ರ ನಡೆಸುವ ನಿಮಗೆ ಬೇಕು ,
ಜಾತಿ ,ಧರ್ಮ,ಭಾಷೆಗಳ ಕುತಂತ್ರ ???

ಕುವೆಂಪು ಅವರ ವಿಶ್ವಮಾನವ ತತ್ವವ
ಜಗಕೆ ಸಾರಿದ ಹೆಮ್ಮೆ ನಮ್ಮದು
ನಿಮ್ಮ ಸಣ್ಣತನಕೆ ಧಿಕ್ಕಾರ..
ಭಾಷೆ ಹೆಸರಲಿ ಶಾಂತಿ ಕದಡುವ,
ನಿಮ್ಮ ರಾಕ್ಷಸ ತನಕೆ ನಮ್ಮ ಧಿಕ್ಕಾರ..


ಡಾ.ಭೇರ್ಯ ರಾಮಕುಮಾರ್
ಹಿರಿಯ ಸಾಹಿತಿಗಳು, ಪತ್ರಕರ್ತರು
ಮೈಸೂರು

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group