Homeಲೇಖನಬೆಳಗಾವಿಯ ಜಿಲ್ಲೆ ಅಭಿವೃದ್ದಿ ಒಂದೇ ಕನಸು - ಈರಣ್ಣ ಕಡಾಡಿ

ಬೆಳಗಾವಿಯ ಜಿಲ್ಲೆ ಅಭಿವೃದ್ದಿ ಒಂದೇ ಕನಸು – ಈರಣ್ಣ ಕಡಾಡಿ

ಜನಸಾಮಾನ್ಯರ ಧ್ವನಿ ಈರಣ್ಣ ಕಡಾಡಿ ಅವರಿಗೆ ಇಂದು ಜನುಮ ದಿನ ಸಂಭ್ರಮ ; ರೈತ ನಾಯಕನಿಗೆ ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ..

ಜನರ ನಡುವಿನ ನಾಯಕ ಎಂದೇ ಪ್ರಖ್ಯಾತಿ ಗಳಿಸಿರುವ  ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹಾಗೂ ನಾಯಕರಾಗಿ ಅವರು ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆ ಅಮೋಘ. ಬಿಜೆಪಿ ಅವರ ಅವಿರತ ಪರಿಶ್ರಮಕ್ಕೆ ತಕ್ಕ ಫಲ ನೀಡಿದೆ. ಬಿಜೆಪಿ ವರಿಷ್ಠರು ಅವರ ಸೇವಾ ಕಾರ್ಯಗಳನ್ನು ಗಮನಿಸಿ ರಾಜ್ಯಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಅವರ ಪಕ್ಷ ನಿಷ್ಠೆಗೆ ತಕ್ಕ ಗೌರವವನ್ನು ನೀಡಿದ್ದಾರೆ.

ಬಿಜೆಪಿಗೆ ಬೆಳಗಾವಿ ಜಿಲ್ಲೆಯಲ್ಲಿ ಭದ್ರವಾದ ನೆಲೆ ಇರಲಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಈರಣ್ಣ ಕಡಾಡಿ ಅವರು ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಇಂದು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರವಾದ ಅಡಿಪಾಯ ಹಾಕಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ ಕೆಲವೇ ಕೆಲವು ನಾಯಕರಲ್ಲಿ ಮುಂಚೂಣಿಯಲ್ಲಿರುವ ಈರಣ್ಣ ಕಡಾಡಿ ಅವರ ಪಕ್ಷ ನಿಷ್ಠೆ ಅಚಲ. ಬಿಜೆಪಿ ಹೊರತಾಗಿ ಏನನ್ನು ಯೋಚಿಸದ ಅವರು ಇಂದು ಹುದ್ದೆಗಳ ಆಸೆ- ಆಮಿಷಗಳಿಗೆ ಬಲಿಯಾಗುತ್ತಿರುವ ರಾಜಕಾರಣಿಗಳ ನಡುವೆ ಅಪವಾದದಂತಿದ್ದಾರೆ.

ಪಕ್ಷದ ಸಿದ್ಧಾಂತ ಮತ್ತು ಜನಸಾಮಾನ್ಯರ ಕಾಳಜಿ ಬಗ್ಗೆ ಈರಣ್ಣ ಕಡಾಡಿ ಅವರಿಗೆ ಎಲ್ಲಿಲ್ಲದ ಗೌರವ. ಅವುಗಳಿಗೆ ಯಾವತ್ತೂ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಅವರ ಧೋರಣೆ. ಜನರ ಯಾವುದೇ ಕೆಲಸಗಳು ಇರಲಿ. ಹಮ್ಮು-ಬಿಮ್ಮ ಇಲ್ಲದೆ ತಮ್ಮ ಬಳಿ ಬಂದ ಜನರ ಕೆಲಸಗಳನ್ನು ಮಾಡುವ ಮೂಲಕ ಈರಣ್ಣ ಕಡಾಡಿ ಅವರು ಜನರಿಗೆ ತೀರಾ ಹತ್ತಿರದ ರಾಜಕಾರಣಿಯಾಗಿ ಬೆಳೆದು ನಿಂತಿದ್ದಾರೆ.

ಹಿರಿಯರ ಮನೆಯೆಂದು ಕರೆಸಿಕೊಂಡಿರುವ ರಾಜ್ಯಸಭೆಯಲ್ಲಿ ನೀರರ್ಗಳವಾಗಿ ಹಿಂದಿಯಲ್ಲಿ ಮಾತನಾಡುವ ಮೂಲಕ ಬೆಳಗಾವಿ ಹಾಗೂ ಕರ್ನಾಟಕದ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಅವುಗಳಿಗೆ ತಾರ್ಕಿಕ ಪರಿಹಾರವನ್ನು ಒದಗಿಸುವ ಕೆಲಸವನ್ನು ಈರಣ್ಣ ಕಡಾಡಿ ಅವರು ತಮ್ಮ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ಮಾಡುತ್ತಾ ಬಂದಿದ್ದಾರೆ. ಜೊತೆಗೆ ಕನ್ನಡ ನಾಡು-ನುಡಿಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ತಮ್ಮ ಅಚಲವಾದ ಕನ್ನಡ ಪ್ರೇಮವನ್ನು ಅವರು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯ ಸದಸ್ಯರಾಗಿ ಅವರು ಇಡೀ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಸದಾ ಮುಂದಿದ್ದಾರೆ. ರೈಲ್ವೆ , ಕೃಷಿ, ಸಹಕಾರ ಮುಂತಾದ ಕ್ಷೇತ್ರಗಳತ್ತ ಅಪಾರ ಆಸಕ್ತಿ ಹೊಂದಿರುವ ಈರಣ್ಣ ಕಡಾಡಿ ಅವರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಕ್ಷೇತ್ರಗಳ ಕೆಲಸ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಬೆಳಗಾವಿ ಜಿಲ್ಲೆಗೆ ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡುವ ಮೂಲಕ ಬೆಳಗಾವಿ ಜಿಲ್ಲೆಯ ಪಾಲಿಗೆ ಅವರು ಭರವಸೆಯ ಆಶಾಕಿರಣರಾಗಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು, ಬೆಳಗಾವಿ ಸೇರಿದಂತೆ ಜಿಲ್ಲೆಯ ರೈಲ್ವೆ ಮೂಲಸೌಕರ್ಯಗಳನ್ನು ಹೆಚ್ಚಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ತರುವ ಕನಸು ಕಂಡಿರುವ ಈರಣ್ಣ ಕಡಾಡಿ ಅವರು ಕ್ರಿಯಾಶೀಲರಾಗಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ.

ಸಹಕಾರಿ ರಂಗದ ಮುಂಚೂಣಿ ನಾಯಕ:

ಶ್ರೀಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ 2002 ರಲ್ಲಿ ಪ್ರಾರಂಭಿಸಲು ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರು ಪಟ್ಟ ಶ್ರಮ ಶ್ಲಾಘನೀಯ. ಜೊತೆಗೆ ಸಹಕಾರಿಯ ಬೆಟಗೇರಿ, ಘಟಪ್ರಭಾ ಹಾಗೂ ಯಾದವಾಡ ಶಾಖೆಗಳನ್ನು ಪ್ರಾರಂಭಿಸಿ ಲಾಭದಾಯಕ ಹಾಗೂ ಪ್ರಗತಿ ಪಥದಲ್ಲಿ ಸಾಗಲು ಪ್ರಯತ್ನಿಸಿದರು. ಅವರ ಕಾರ್ಯವನ್ನು ಜನಸಾಮಾನ್ಯರ ಮಾತುಗಳಲ್ಲಿ ಕೇಳುತ್ತೇವೆ. ಸಹಕಾರಿ ರಂಗದಲ್ಲೂ ಅವರು ಛಾಪು ಮೂಡಿಸಿದ್ದಾರೆ.

ಶ್ರೀ ಮಹಾಲಕ್ಷ್ಮೀ ಪಿಕೆಪಿಎಸ್,ದಿ.ಕಲ್ಲೋಳಿ ಹಾಲು ಉತ್ಪಾದಕರ ಸಹಕಾರಿ ಸಂಘ,ಸೇವಾ ಸಂಸ್ಥೆ, ಶ್ರೀ ಅಲ್ಲಮಪ್ರಭು ಎಫ್ ಪಿಒ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸ್ಥಾಪಿಸಿದ್ದಾರೆ. ಅವುಗಳ ಪ್ರಗತಿ ಶ್ರಮಿಸುತ್ತಿದ್ದಾರೆ. ಅವರು ಹಿಡಿದ ಕೆಲಸ ಮುಗಿಸುವರೆಗೆ ಬಿಡುವ ಮಾತೇ ಇಲ್ಲ ಎನ್ನುವುದು ಪ್ರಚಲಿತ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಅಭಿಮಾನಿಗಳು ಹಾಗೂ ನಾಗರಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೇವರು ಅವರಿಗೆ ಉತ್ತಮ ಆರೋಗ್ಯ ಆಯುಷ್ಯಗಳನ್ನು ನೀಡಲಿ ಎನ್ನುವುದು ಅವರ ಅಪಾರ ಅಭಿಮಾನಿಗಳ ಹಾರೈಕೆಯಾಗಿದೆ.

ಪರಪ್ಪ ಗಿರೆನ್ನವರ, ಕಲ್ಲೊಳಿ

 

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group