ಭಾರತೀಯ ಸೇನೆಯ ಕಾರ್ಯಾಚರಣೆ ಸಿಯಾಚಿನ್ ನಲ್ಲಿ…

Must Read

ನಮ್ಮ ಉಸಿರು ಉಳಿಸಿದೆ ಸೇನೆ

ಹಿಮದ ನಡುಗಡ್ಡೆಯಲ್ಲಿ
ಕೊರೆಯುವ ಚಳಿಯಲ್ಲಿ
ಭಾರತಾಂಬೆಯ ಮಕ್ಕಳು
ಶತ್ರುಗಳ ಸದೆ ಬಡಿಯುತ್ತಾ
ಪ್ರಾಣ ಲೆಕ್ಕಿಸದೆ ನಿಂತಿಹರು
ತಾಯ್ನಾಡಿನ ವೀರಯೋಧರು

ಒಂದೇ ಬಾರಿಗೆ
ಮೈಮೇಲೆ ಬಂದೆರೆಗುವ
ರಕ್ಕಸ ಹಿಮದ ರಾಶಿ
ಅಂಜದೇ – ಕುಗ್ಗದೆ
ಎದೆಯೊಬ್ಬಿಸಿ ನಿಂತಿಹರು
ತಾಯ್ನಾಡಿನ ವೀರಯೋಧರು

ಕ್ಷಣ ಕ್ಷಣವೂ ಬದಲಾಗುವ
ಸಿಯಾಚಿನ್ ಪ್ರಕೃತಿಯ
ಮಡಿಲಲ್ಲಿ ಜೀವದ ಹಂಗು
ತೊರೆದು ನಮ್ಮೆಲ್ಲರಿಗೂ
ಉಸಿರು ನೀಡಿ ನಿಂತಿಹರು
ತಾಯ್ನಾಡಿನ ವೀರಯೋಧರು

ದೇಶದ ಗಡಿಯಲ್ಲಿ
ಅವರ ಉಸಿರನು ಲೆಕ್ಕಿಸದೆ
ವೀರ ಮರಣವನ್ನು ಎದೆಗಪ್ಪಿ
ಭಾರತಾಂಬೆಯ ಸೇವೆ
ಸಲ್ಲಿಸುತ್ತಾ ನಿಂತಿಹರು
ತಾಯ್ನಾಡಿನ ವೀರಯೋಧರು

ನಮ್ಮ ಹೆಮ್ಮೆಯ ಯೋಧರಿಗೆ
ಒಂದು ಹೃದಯ ಪೂರ್ವಕ ಸಲಾಂ


ಅನಂತ ಕಲ್ಲಾಪುರ , ತೀರ್ಥಹಳ್ಳಿ

Latest News

ಪೂ ಚಂ ತೇ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ : ಡಿ. ಕೆ.ಶಿವಕುಮಾರ

ಬೆಂಗಳೂರು ನಗರದ ಲಾಲ್ ಬಾಗ್ ನಲ್ಲಿ ಜನವರಿ 15 ರಿಂದ 26ರ ವರೆಗೆ ಏರ್ಪಡಿಸಲಾಗಿರುವ ಫಲ ಪುಷ್ಪ ಪ್ರದರ್ಶನವನ್ನು ಡಿ. ಕೆ. ಶಿವಕುಮಾರ್ ಅವರು ಬುಧವಾರ...

More Articles Like This

error: Content is protected !!
Join WhatsApp Group