spot_img
spot_img

ಶಾಖಾಘಾತ ; ಆರೇಂಜ್ ಅಲರ್ಟ್ ಘೋಷಣೆ

Must Read

- Advertisement -

ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ ೪ ರವರೆಗೆ ಬಿಸಿಗಾಳಿ ಅಲೆಯೊಂದಿಗೆ ಬೆಚ್ಚಗಿನ ರಾತ್ರಿ ಹೆಚ್ಚಾಗುವ ಸಂಭವವಿರುವುದರಿಂದ ಜನತೆ ಹುಷಾರಾಗಿ ಇರಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆರೇಂಜ್ ಅಲರ್ಟ್ ಘೋಷಣೆ ಮಾಡಿದೆ.

ಪ್ರಕಟಣೆಯೊಂದರಲ್ಲಿ ಇಲಾಖೆಯು ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲಿ ದಿ. ೧ ರಿಂದ ೪ ರವರೆಗೆ ಹಗಲು ಬಿಸಿ ಗಾಳಿ ಹಾಗೂ ರಾತ್ರಿ ತೇವಭರಿತ ವಾತಾವರಣ ಇರುವುದಾಗಿ ಎಚ್ಚರಿಸಿದೆ.

ಬಿಸಿಲು ಹೆಚ್ಚಾಗಿರುವುದರಿಂದ ಹೆಚ್ಚು ನೀರು ಕುಡಿಯಬೇಕು, ಪ್ರಯಾಣದಲ್ಲಿ ಜೊತೆಗೆ ನೀರಿನ ಬಾಟಲ್ ಒಯ್ಯಬೇಕು, ನಿಂಬೆ ಶರಬತ್ತು, ಮಜ್ಜಿಗೆ, ಲಸ್ಸಿ ಮುಂತಾದವುಗಳ ಸೇವನೆ, ಕಲ್ಲಂಗಡಿ, ಸೌತೆಕಾಯಿ ಸೇವನೆ ಮಾಡಬೇಕು. ಒಳಾಂಗಣದಲ್ಲಿದ್ದಾಗ ತಣ್ಣೀರಿನ ಸ್ನಾನ ಮಾಡಬೇಕು ಹಾಗೂ ಛತ್ರಿ, ಟೋಪಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಟೀ ಕಾಫಿ, ಮದ್ಯ ಸೇವಿಸಬಾರದು, ಕಾರಿನಲ್ಲಿ ಮಕ್ಕಳನ್ನು ಬಿಡಬಾರದು ಹಾಗೂ ಮಧ್ಯಾಹ್ನ ೧೨ ರಿಂದ ೩ ರವರೆಗೆ ಹೊರಗಡೆ ಹೋಗಬಾರದು ಎಂದು ಇಲಾಖೆ ತಿಳಿಸಿದೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group