ಸಿಂದಗಿ – ದಿನಾಂಕ: ೦೧-ಸಪ್ಟೆಂಬರ್-೨೦೨೫ ರಂದು ಬಸವನಬಾಗೆವಾಡಿ ಯಲ್ಲಿ ಸಾಂಸ್ಕೃತಿಕ ನಾಯಕ ಸ್ತ್ರೀ, ಪಥಿತ, ದೀನ-ದಲಿತ ಕುಲೋದ್ದಾರಕ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮಗುರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಜನಕ, ಜಗಜ್ಯೋತಿ ಬಸವಣ್ಣನವರ ಬಸವ ಸಂಸ್ಕೃತಿ ಅಭಿಯಾನ ವನ್ನು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಪರ ಎಲ್ಲಾ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಈ ಅವಿಸ್ಮರಣೀಯ ಮತ್ತು ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವ ಕೃಪೆಗೆ ಪಾತ್ರರಾಗಬೇಕೆಂದು ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಎಲ್ಲಾ ಬಸವಪರ ಸಂಘಟನೆಗಳ ಪರವಾಗಿ ಶ್ರೀಮತಿ ಅಂಬಿಕಾ ಪಾಟೀಲ ಮಾರ್ಸನಳ್ಳಿ ವಿನಂತಿಸಿದ್ದಾರೆ..
ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛಿಸುವ ಸರ್ವರು, ಮಹಿಳೆಯರು- ಇಳಕಲ ಸೀರೆಯನ್ನು ಧರಿಸಬೇಕು, ಪುರುಷರು- ನೆಹರು ಶರ್ಟ, ಗಾಂಧಿ ಟೊಪ್ಪಿಗೆ, ಬಿಳಿ ಲುಂಗಿ/ಪೈಜಾಮಾ ಅಥವಾ ಧೋತಿಯನ್ನು ಧರಸಿ ಬರಬೇಕು.
ಈ ಮೇಲೆ ತಿಳಿಸಿದ ಉಡುಗೆಳನ್ನು ಧರಿಸಿ ಸಾಂಸ್ಕೃತಿಕ ಅಭಿಯಾನಕ್ಕೆ ಶೋಭೆ ತರಬೇಕೆಂದು ಅಲ್ಲದೆ ದಿ. ೨೭ ಮತ್ತು ೨೮ ರ ಒಳಗಾಗಿ ತಮ್ಮ ಮಾಹಿತಿಯನ್ನು ನೀಡಿ ಸ್ಥಳ ಕಾಯ್ದಿರಿಸಿಕೊಳ್ಳಬೇಕು. ಮೊ:-೮೧೨೩೪೬೦೫೮೨, ೯೪೪೮೧೧೮೫೯೩, ೭೭೯೫೩೪೪೦೨೩ ಸಂಪರ್ಕಿಸುವಂತೆ ಕೋರಿದ್ದಾರೆ.