ಕವನ : ಮಣ್ಣಿನ ಅಳಲು

Must Read

ಮಣ್ಣಿನ ಅಳಲು

ನಾನು ಸಧೃಢವಾಗಿದ್ದಾಗ
ಎಷ್ಟು ಹುಲುಸು ಹಸಿರು
ಬಾಳೆ ತೆಂಗು ಸೊಬಗು
ಭೂಮಿ ದೇವತೆ ಎಂಬ
ಗೌರವ ಪೂಜೆ

ನದಿ ಹಳ್ಳಗಳು ಕೊಚ್ಚಿದವು
ನಾನೀಗ ನದಿ ಸಮುದ್ರದ
ಮಡಿಲು ಸೇರಿದೆ
ಹಣದ ಆಸೆಗೆ ರಾಸಾಯನಿಕ
ವಿಷದ ಗೊಬ್ಬರ

ಕಬ್ಬು ಸಿಹಿ ಅಲ್ಲ
ನನ್ನ ಬರಡು ಮಾಡಿದ ಕಹಿ
ನಿತ್ಯ ಬಂಜೆಯಾಗುತ್ತಿದ್ದೇನೆ
ಮುಂದೊಮ್ಮೆ ನನ್ನೊಡಲಲಿ
ಹುಲ್ಲು ಹುಟ್ಟದು

ನನ್ನೆದೆಯ ಮೇಲೆ
ಸಿಮೆಂಟ್ ಜೆಲ್ಲಿ ಕಲ್ಲು
ಡಾಂಬರನಲ್ಲಿ ನನ್ನ
ಹೂತು ಬಿಟ್ಟರು
ಉಸಿರುಗಟ್ಟಿದೆ ಸಾಯದೆ ಬದುಕಿರುವೆ

ಕೆರೆ ಹಳ್ಳಗಳಿಗ ಮಾಯ
ಅವುಗಳ ಮೇಲೆ ಕಾಂಕ್ರೀಟ್ ಕಾಡು
ಮುಗಿಲು ಮುಟ್ಟುವ ಕಟ್ಟಡ
ನನ್ನ ಕರುಳ ಅಗೆದು ನಕ್ಕವು
ನಾನು ಮೌನ

ಫಲವತ್ತಾದ ಭೂಮಿಗಳಿಗ
ಆಟದ ಕ್ರೀಡಾಂಗಣ
ವಿಶ್ವ ಕಪ್ ಕೋಟಿ ಭಾಜಿ
ಹರಾಜು ಹಾಕಿದ್ದಾರೆ ನನ್ನನು
ಹುಣ್ಣು ಮಾದಿಲ್ಲ ರಕ್ತ ಸುರಿದು

ಭೂ ಕಬಳಿಕೆ ಅರಣ್ಯ ನಾಶ
ರೆಸಾರ್ಟ್ ಕುಡಿತ ಮೋಜು ಮಸ್ತಿ
ಕಡಲ ತೀರದಲಿ ದಬ್ಬಾಳಿಕೆ
ಭೂ ಕುಸಿತ ಕಡಲ ಕೊರೆತ
ಉಪ್ಪು ನೀರಿನಲ್ಲಿ ಬಂಧಿಯಾದೆನು

ನಾನು ನಿಮ್ಮನ್ನು ಪ್ರೀತಿಸುತ್ತೇನೆ
ನಿಮ್ಮಅನಾದಾರಕ್ಕೆ ಬೇಸರ
ಮಣ್ಣಲ್ಲಿಯೇ ನನ್ನನ್ನು ಮಣ್ಣು ಮಾಡಿದಿರಿ
ನೀವಾದರೂ ಉಳಿವಿರೋ
ಉಳಿದು ಬಿಡಿ ನಾನು ಮೌನ

ಸಾವಿರು ಎಕರೆ ನೆಲ ಖಾಸಗಿಯವರಿಗೆ
ಉದ್ಧಿಮೆ ವಾಣಿಜ್ಯ ವ್ಯವಹಾರಕೆ
ನೀಚ ಮಂತ್ರಿಯಿಂದ ನನಗೆ ಪೂಜೆ
ಬಹುಮಹಡಿ ಕಟ್ಟಡಕೆ ಶಂಕು ಶಿಲಾನ್ಯಾಸ
ಮತ್ತೆ ತಿವಿದರು ಗುದ್ದಲಿ ಸಲಾಕೆಯಲಿ

ನೀವೆಲ್ಲ ನಕ್ಕು ಚಪ್ಪಾಳೆ ತಟ್ಟಿದಿರಿ
ಮಿಠಾಯಿ ತಿಂದಿರಿ ಗುತ್ತೆಗೆದಾರರ ಲೆಕ್ಕಾಚಾರ
ಹದುಳ ಮಣ್ಣನು ಬಳಸಿ ಬಿಸಾಕಿದಿರಿ
ಜನನಿ ಜನ್ಮ ಭೂಮಿ ಸ್ವರ್ಗವೆಂಬ ಹುಸಿ ಮಾತು
ಇಂದು ವಿಶ್ವ ಮಣ್ಣಿನ ದಿನ

ನನ್ನ ನೀವು ಉಳಿಸಿ
ನಿಮ್ಮನ್ನು ಉಳಿಸಿ ಬೆಳೆಸುವೆನು
ಇದು ಮಣ್ಣಿನ ಅಳಲು

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ – ತಹಸೀಲ್ದಾರ ಶ್ರೀಶೈಲ ಗುಡುಮೆ

ಮೂಡಲಗಿ - ನಮ್ಮ ದೇಶದಲ್ಲಿ ನಾಯಕನಾಗುವವನು ಯಾವುದೇ ರಾಜ ಮಹಾರಾಜರ ಮನೆಯಲ್ಲಿ ಜನಿಸುವುದಿಲ್ಲ ಬದಲಾಗಿ ನಮ್ಮ ಯುವಕರು ಹಾಗೂ ಮತದಾರರು ಮತ ನೀಡುವ ಬ್ಯಾಲೆಟ್ ಬಾಕ್ಸ್...

More Articles Like This

error: Content is protected !!
Join WhatsApp Group