spot_img
spot_img

ಕವನ : ಕಟ್ಟ ಬನ್ನಿ

Must Read

spot_img
- Advertisement -

ಕಟ್ಟ ಬನ್ನಿ

ಗೆಳೆಯರೇ
ನಾವು ದೊಡ್ಡ ದೇಶದ
ದಡ್ಡ ಜನರು
ಮೂಢರು ಮೂರ್ಖರು
ಭಾವುಕರು ಮುಗ್ಧರು
ದೊಡ್ಡವರನ್ನು ತಲೆಯ ಮೇಲೆ
ಹೊತ್ತು ಕುಣಿಯುವವರು

ಬಾಬಾಸಾಹೇಬ ಅಂಬೇಡ್ಕರರನ್ನು
ದಲಿತರಿಗೆ ಮೀಸಲಿಟ್ಟೆವು
ಆಗಲಿಲ್ಲ ರಾಷ್ಟ್ರ ನಾಯಕ
ಕ್ರಾಂತಿಕಾರಿ ಬಸವನನ್ನು
ಕಾವಿ ಮಠಗಳು ಕಟ್ಟಿಬಿಟ್ಟವು
ಆಗಲಿಲ್ಲ ಜಗದ ಬೆಳಕು

- Advertisement -

ಅವನ ಹೆಸರಲಿ ಬದುಕುತಿಹೆವು
ಗಾಂಧಿಯನ್ನು ಕೊಂದು ಬಿಟ್ಟೆವು
ಒಂದು ಪಕ್ಷ ಕಟ್ಟಿಬಿಟ್ಟೆವು
ಪಠ್ಯದಲ್ಲಿ ಚರಕ ನೂತು
ಗ್ರಾಮ ರಾಜ್ಯ ಕಂಡೆವು

ಬುದ್ಧನನ್ನು ಓಡಿಸಿದೆವು
ದೇಶ ಬಿಟ್ಟು ಗಡಿಯಾಚೆ
ವಿಶ್ವ ತುಂಬಾ ಅವನ ನೆನಹು
ಇಲ್ಲಿ ಮಾತ್ರ ಕತ್ತಲು.

ಜಾತಿ ಧರ್ಮ ಪಂಥ ಕದನ
ನಿಲ್ಲಲಾರದ ರೋದನ
ಎಲ್ಲಾ ಬಿಟ್ಟು ಕಟ್ಟ ಬನ್ನಿ
ನಮ್ಮ ಭಾರತ ಸಾಧನ
__________________

- Advertisement -

ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ವಾವಲಂಬಿಗಳಾಗಿ ಉತ್ತಮ ಜೀವನ ಸಾಗಿಸಿ: ವಿದ್ಯಾರ್ಥಿಗಳಿಗೆ ಎನ್.ಆರ್. ಠಕ್ಕಾಯಿ ಕರೆ

ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಹೇಳಿದರು. ತಾಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group