ಕವನ : ಸಾಧಿಸಿದ್ದೇನು ?

Must Read

ಸಾಧಿಸಿದ್ದೇನು ?

ಮರೆತು ಬಿಟ್ಟೇವಾ ಮಾನವೀಯತೆ
ಎತ್ತ ನೋಡಿದರೂ ರಕ್ತ ಕಣಗಳು
ಬಿತ್ತಲಾರೆವಾ ಕರುಣೆ ವಾತ್ಸಲ್ಯ
ಮನುಜನೆಂಬುದಕೆ ಧಿಕ್ಕಾರ

ದ್ವೇಷದ ಕಿಚ್ಚು ಹಚ್ಚಿ
ಮೋಹದ ಮದ ಏರಿ
ದಾಹದ ನರ್ತನಕೆ
ಕಿತ್ತು ತಿಂದಿರ

ಪ್ರೇಮದ ಶಿಖರಕೆ
ಸೂತಕದ ಛಾಯೆ ಮೂಡಿಸಿ
ಧರ್ಮದ ಸೋಗಲಿ
ಆತ್ಮದ ಮರ್ಮ ತಿಳಿಯಲಿಲ್ಲವೇ

ಎಲ್ಲಿಹುದು ಹಿಂಸೆಯ ಧರ್ಮ
ಗಾಂಪರರೊಡೆಯನ ನೀತಿಯಂತೆ
ಭೀತಿ ಹುಟ್ಟಿಸುವಿರೇಕೆ
ನೀತಿ ನಿಯಮ ಗಾಳಿಗೆ ತೂರಿ

ಅದೆಷ್ಟೊ ಕನಸುಗಳು ಕಮರಿ ಹೋಗಿವೆ
ಮನಸುಗಳ ಛಿದ್ರ ಮಾಡಿವೆ
ಮುನಿಸುಗಳ ಬಿರುಕು ಬಿಟ್ಟಿದೆ
ಸಾಧಿಸಿದ್ದಾದರೂ ಏನು ?

ರೇಷ್ಮಾ ಕಂದಕೂರ, ಗಂಗಾವತಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group