ಕವನ : ಸಾಧಿಸಿದ್ದೇನು ?

Must Read

ಸಾಧಿಸಿದ್ದೇನು ?

ಮರೆತು ಬಿಟ್ಟೇವಾ ಮಾನವೀಯತೆ
ಎತ್ತ ನೋಡಿದರೂ ರಕ್ತ ಕಣಗಳು
ಬಿತ್ತಲಾರೆವಾ ಕರುಣೆ ವಾತ್ಸಲ್ಯ
ಮನುಜನೆಂಬುದಕೆ ಧಿಕ್ಕಾರ

ದ್ವೇಷದ ಕಿಚ್ಚು ಹಚ್ಚಿ
ಮೋಹದ ಮದ ಏರಿ
ದಾಹದ ನರ್ತನಕೆ
ಕಿತ್ತು ತಿಂದಿರ

ಪ್ರೇಮದ ಶಿಖರಕೆ
ಸೂತಕದ ಛಾಯೆ ಮೂಡಿಸಿ
ಧರ್ಮದ ಸೋಗಲಿ
ಆತ್ಮದ ಮರ್ಮ ತಿಳಿಯಲಿಲ್ಲವೇ

ಎಲ್ಲಿಹುದು ಹಿಂಸೆಯ ಧರ್ಮ
ಗಾಂಪರರೊಡೆಯನ ನೀತಿಯಂತೆ
ಭೀತಿ ಹುಟ್ಟಿಸುವಿರೇಕೆ
ನೀತಿ ನಿಯಮ ಗಾಳಿಗೆ ತೂರಿ

ಅದೆಷ್ಟೊ ಕನಸುಗಳು ಕಮರಿ ಹೋಗಿವೆ
ಮನಸುಗಳ ಛಿದ್ರ ಮಾಡಿವೆ
ಮುನಿಸುಗಳ ಬಿರುಕು ಬಿಟ್ಟಿದೆ
ಸಾಧಿಸಿದ್ದಾದರೂ ಏನು ?

ರೇಷ್ಮಾ ಕಂದಕೂರ, ಗಂಗಾವತಿ

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group