ಕವನ

Must Read

ಬೇಕಿಲ್ಲ ಸಮತೆ ಕ್ರಾಂತಿ

ಎಂದೂ ಸೋಲದ
ಆರ್ಯ ಪುರುಷ
ವೀರ ಶೂರ ಕ್ಷತ್ರಿಯ
ಶ್ರೀ ರಾಮಚಂದ್ರ ಮೊನ್ನೆ
ಆಯೋಧ್ಯೆಯಲ್ಲಿಯೇ
ಸೋತು ಬಿಟ್ಟ
ಅವನೊಬ್ಬ ಮಹಾಪುರುಷ
ಮನುಷ್ಯ ನಿರ್ಮಿತ
ಜಾತಿ ಮತ ಧರ್ಮಗಳ
ಸೀಮೆ ದಾಟಿದ ಯೋಧ
ಶ್ರೀರಾಮನ ಶಾಪವೊ
ಕೋಪವೊ ಗೊತ್ತಿಲ್ಲ
ಇವರೂ ಸೋತು ಬಿಟ್ಟರು
ಈಗ ಪುರಿಯಲ್ಲಿ
ಜಗನ್ನಾಥನ ಸರದಿ
ಪಾಪ ಅವನಿಗೂ
ಭಯ ಭೀತಿ
ಅವರು ಇಲ್ಲಿ ಗೆದ್ದಿದ್ದಾರೆ
ಬುದ್ಧ ಬಸವ ಬಾಪು
ಅಂಬೇಡ್ಕರ ಎಂದೋ
ಸೋತು ಬಿಟ್ಟರು
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಇದು ಭಾಷಣ ಲೇಖನ
ಗೋಡೆಯ ಮಾತು
ಬದಲಾಗುವದಿಲ್ಲ ಭಾರತ
ಬೇಕಿಲ್ಲ ಸಮತೆ ಕ್ರಾಂತಿ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group