Homeಕವನಕವನ

ಕವನ


ವಿಧಾನಸೌಧ ಮಳಿಗೆಯು

ಅವರು ಕಳ್ಳರೆಂದು ಅರಿತು
ನಾವು ನಿಮಗೆ
ಮತವ ಕೊಟ್ಟೆವು
ನೀವು ಕೊಳ್ಳೆ
ಲೂಟಿ ಹೊಡಿದಿರಿ
ಭೂಮಿ ಬಿರುಕು ಬಿಟ್ಟಿತು

ಅವರು ಸುಳ್ಳರು
ಎಂದು ತಿಳಿದು
ನಿಮ್ಮ ಆಯ್ಕೆಯಾಯಿತು
ಅಲ್ಲ ನೀವು ಸತ್ಯವಂತರು
ಅಲ್ಲ ಅವರು ನೀತಿವಂತರು
ವಿಧಾನಸೌಧ ಮಳಿಗೆಯು

ತೆರಿಗೆ ತುಡುಗು ಮಾಡಿ
ನೀವು ಭವ್ಯ ಬಂಗಲೆ
ಕಟ್ಟಿ ಕೊಂಡಿರಿ
ಹೆಸರಿಗೊಂದು ಚುನಾವಣೆ
ಪ್ರಜಾಪ್ರಭುತ್ವ ಘೋಷಣೆ
ನೀವು ಅವರು ಹಂಚಿಕೊಂಡಿರಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group