ಕವನ : ಕಲ್ಲು ದೇವರು

Must Read

ಕಲ್ಲು ದೇವರು

ಕಲ್ಲು ದೇವರು
ದೇವರಲ್ಲ
ಎಂದ ನಮ್ಮ ಬಸವನು
ಕಲ್ಲು ಮೂರ್ತಿ
ಮಾಡಿ ಬಿಟ್ಟೆವು
ನಾವು ನೀವು ಮಠಗಳು

ಮಣ್ಣು ಮೂರ್ತಿ
ದೇವರಲ್ಲ
ಎಂದ ನಮ್ಮ ಶರಣನು
ಮಣ್ಣು ಮಾಡಿ ಬಿಟ್ಟೆವು
ನಮ್ಮ ಭಕ್ತರು
ಲಿಂಗ ಜಂಗಮ ತತ್ವವು

ಕಂಚು ಲೋಹ
ದೇವರಲ್ಲ
ಎಂದ ನಮ್ಮ ಹಿರಿಯರು
ಕಂಚು ಮೂರ್ತಿಗೆ
ಕೋಟಿ ಸುರಿದರು
ನಮ್ಮ ಮೂರ್ಖ ಮನುಜರು

ನಮ್ಮ ಅರಿವೆ ಗುರು
ಆಚಾರವು ಲಿಂಗ
ಹಂಚಿಕೊಳ್ಳುವ ಅನುಭಾವ
ಜಂಗಮವೆಂದರು ಪ್ರಮಥರು
ಎಲ್ಲಾ ಮರೆತು ಕಾವಿ ಹಿಂದೆ
ಕುಣಿವ ನಾವು ಮೂಢರು
__________________________
ಡಾ ಶಶಿಕಾಂತ ಪಟ್ಟಣ, ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group