ಕವನ : ಗುರುವಿಗೆ ಕಂಬನಿ

Must Read

ಗುರುವಿಗೆ ಕಂಬನಿ

ಕರುನಾಡ ನೆಲದಲ್ಲಿ
ಹುಲುಸು ಧಾರವಾಡದ ಪುರವು
ಕರ್ನಾಟಕ ಕಾಲೇಜಿನಲ್ಲಿ
ಇದ್ದರೊಬ್ಬರು ಗುರು ಇಲ್ಲದಂತೆ
ಅತಿ ಶಿಸ್ತಿನ ಶಿಕ್ಷಕ
ಸಮಯ ಪಾಲಕ
ಗಂಭೀರ ನಡೆ ಸೌಮ್ಯ ನುಡಿ
ಪಾಠ ಮಾಡುವ ಕಾರ್ಯ
ಜಪ ತಪ ಪೂಜೆ
ಮಂದಹಾಸದ ನಗೆ
ವಿದ್ಯಾರ್ಥಿಗಳ ಚಿಲುಮೆ
ಬರಹ ಓದು ಕವನ
ನಾಟಕಗಳ ಗೀಳು
ಅದೆಷ್ಟೋ ಮಕ್ಕಳಿಗೆ ಮಾರ್ಗದರ್ಶಿ
ಸ್ನೇಹ ಸಮತೆಯ ಪ್ರೇಮದರ್ಶಿ
ಚೆಲುವಾಯಿತು ಕನ್ನಡವು
ಗೋಕಾಕ ಚಳವಳಿಯು
ವಿದ್ಯಾವರ್ಧಕ ಭವನದ
ಹೊನ್ನ ಗುಡಿಯು
ಭರತೇಶನ ಭೋಗವೈಭವ
ಕಾವ್ಯ ಕುಸುಮವು ನಿಮಗೆ
ಯಾರಿಲ್ಲದ ಹಾದಿಯಲಿ
ಸದ್ದಿಲ್ಲದೇ ಹೋದಿರಿ
ಬಿಕ್ಕುತಿಹೆವು ನಾವು
ನಿಮ್ಮ ಕರುಣೆ ಕುಡಿಗಳು
ಹೋಗಿ ಬನ್ನಿರಿ ಗುರುಗಳೇ
ನಿಮಗಿಂದು ವಿದಾಯ
ನಾನು ಏಕಲವ್ಯನಾದೆ ಗುರುವೇ
ಆಗಲಿಲ್ಲ ನೀವು ದ್ರೋಣರು
ನಿಮ್ಮ ನೆನಪಿನಲಿ ನಡೆಯುವೆವು
ಬಿ ವಿ ಗುಂಜೆಟ್ಟಿಯವರೇ
ನಿಮಗೆ ನಮ್ಮ ಶೋಕದ
ನೋವಿನ ಕಂಬನಿ ಅರ್ಪಣೆ

————————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

(ನಾನು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗ ಐಚ್ಚಿಕ ಹಿಂದಿ ವಿಷಯವನ್ನು ತೆಗೆದು ಕೊಂಡಿದ್ದರೂ ನನ್ನ ಸಾಹಿತಿಕ ಅಭಿರುಚಿ ಗುರುತಿಸಿ ಬರೆಯಲು ಬೆನ್ನು ತಟ್ಟಿದ ನನ್ನ ಗುರುಗಳು. ಅವರೊಬ್ಬ ಭವ್ಯ ಮಾನವ ವಿದ್ಯಾರ್ಥಿಗಳನ್ನು ಅತಿಯಾಗಿ ಪ್ರೀತಿಸಿ ಪ್ರೋತ್ಸಾಹಿಸಿದ ಶಿಸ್ತಿನ ಶಿಪಾಯಿ. ಮೃತರ ಕುಟುಂಬಕ್ಕೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ರಾಮದುರ್ಗದ ವತಿಯಿಂದ ಭಕ್ತಿಪೂರ್ವಕ ಶೋಕದ ನಮನಗಳು.)

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group