Homeಕವನಕವನ : ಹೃದಯದಿ ಮೊಳಗಲಿ ವಂದೇ ಮಾತರಂ

ಕವನ : ಹೃದಯದಿ ಮೊಳಗಲಿ ವಂದೇ ಮಾತರಂ

spot_img

ಹೃದಯದಿ ಮೊಳಗಲಿ ವಂದೇ ಮಾತರಂ

ಮತ್ತೆ ಬಂದಿದೆ ಸಂಭ್ರಮದ ಸ್ವಾತಂತ್ರ್ಯ ದಿನವು
ಹಾರಲಿ ಕೆಂಪು ಕೋಟೆಯ ಮೇಲೆ ತಿರಂಗವು
ಅರ್ಪಿಸೋಣ ಭಾರತ ಮಾತೆಗೆ ಸ್ವಾತಂತ್ರ್ಯದ ಹೋರಾಟವು
ಹೇಳಲಿ ವಂದೇ ಮಾತರಂ ಪ್ರತಿ ಹೃದಯವು

ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗಳಿಗೆ
ಸಿಗಲಿ ಸ್ವಾತಂತ್ರ್ಯ ವರದಕ್ಷಿಣೆ ಕೊಡುವ ಹೆತ್ತವರಿಗೆ
ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವ ಅಮಾಯಕರಿಗೆ
ಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ ಹೆಣ್ಣು ಮಕ್ಕಳಿಗೆ

ಭಾರತದ ವೈಭವ ಕೇಸರಿ ಬಿಳಿ ಹಸಿರು ಧ್ವಜದಲಿ
ನಿತ್ಯ ವಂದೇ ಮಾತರಂ ಹೃದಯದಿಂದ ಮೊಳಗಲಿ
ನಮ್ಮ ಬಾವುಟ ಸೂರ್ಯನ ಹೊಂಗಿರಣದಂತೆ ಹೊಳೆಯುತ್ತಿರಲಿ
ಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ ಗುರುವಾಗಲಿ

ಸ್ವಾತಂತ್ರ್ಯ ದಿನ ಮೀಸಲಿರದಿರಲಿ ಕೇವಲ ಒಂದು ದಿನಕ್ಕೆ
ಸ್ಮರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿ ಕ್ಷಣಕ್ಕೆ
ಅವರ ನೆನಪು ಆಗದಿರಲಿ ಕೇವಲ ಪೊಳ್ಳು ಭಾಷಣಕ್ಕೆ
ಬೆಳೆಸಿ ಉಳಿಸಿ ಸಂಸ್ಕೃತಿ ಪರಂಪರೆ ಪ್ರತಿ ಜನ್ಮಕ್ಕೆ

ದೇಶ ಸೇವೆಯೇ ಈಶ ಸೇವೆ ಎನ್ನುವ
ಹುತಾತ್ಮರಾದ ರಾಷ್ಟ್ರ ನಾಯಕರನ್ನು ನಿತ್ಯ ಸ್ಮರಿಸುವ
ಉಳಿಸಿ ಬೆಳೆಸಿರಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವ
ಮುಡಿಪಾಗಿರಲಿ ದೇಶದ ಅಭಿವೃದ್ಧಿಗೆ ನಮ್ಮ ಜನ್ಮವ

ಸ್ಮರಿಸೋಣ ಮಾಡು ಇಲ್ಲವೇ ಮಡಿ ಎಂದ ಗಾಂಧೀಜಿಯನು
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದ ತಿಲಕರನು
ಇಂಕ್ವಿಲಾಬ್ ಜಿಂದಾಬಾದ್ ಎಂದ ಭಗತ್ ಸಿಂಗ್ ರನು
ಜೈ ಹಿಂದ್ ಎಂದಿರುವ ಸುಭಾಷ್ ಚಂದ್ರ ಬೋಸ್ ರನು

 ಮುತ್ತು ಯ. ವಡ್ಡರ
ಶಿಕ್ಷಕರು,ಹಿರೇಮಾಗಿ
ಬಾಗಲಕೋಟ
9845568484

RELATED ARTICLES

Most Popular

error: Content is protected !!
Join WhatsApp Group