ಕವನ : ಬಸವ ಸಂಸ್ಕೃತಿ ಅಭಿಯಾನ

Must Read

ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ
ಅಭಿಯಾನ
ಎಂದರೆ ಬರಿ ಕಾವಿಗಳ
ದಂಡ ಯಾತ್ರೆಯಲ್ಲ
ಶಾಸಕ ಮಂತ್ರಿಗಳ
ಮೆರವಣಿಗೆಯಲ್ಲ
ಮಲಗಿದ್ದ ನಿದ್ರಾಸುರರಿಗೆ
ಉದ್ದೀಪನ ಔಷಧಿ ನೀಡಿ
ಸತ್ಯ ಮರೆ ಮಾಚುವುದಲ್ಲ
ಮಠಗಳಲ್ಲಿ ನೂರು ಕರ್ಮಕಾಂಡ
ಹೊರಗೆ ಪ್ರಗತಿ ತೋರುವದಲ್ಲ
ಬುದ್ಧ ಬಸವ ಹೆಸರಿನಲ್ಲಿ
ರಾಷ್ಟ್ರ ಕೊಳ್ಳೆ ಹೊಡೆಯುವುದಲ್ಲ
ಗುರು ಲಿಂಗ ಜಂಗಮ ಮರೆತು
ಅಗ್ರಹಾರದ ಸಂಸ್ಕೃತಿಗೆ
ಆಹಾರವಾಗುವುದಲ್ಲ
ಜಾತಿ ಲಿಂಗ ತಾರತಮ್ಯ
ಮಾಡುವವರಿಗೆ
ಛತ್ರಿ ಚಾಮರ ಹಿಡಿಯುವದಲ್ಲ
ವಚನ ಸುಟ್ಟವರ ಜೊತೆಗೆ
ಕೈ ಜೋಡಿಸಿ ಮತವ ಬೇಡುವುದಲ್ಲ
ಕೊರಳ ಲಿಂಗ ಸಾಕ್ಷಿಯಾಗಿ
ಸತ್ಯ ಸಮತೆ ಶಾಂತಿ ಪ್ರೀತಿ
ನುಡಿವ ನುಡಿದಂತೆ
ನಡೆಯುವುದೇ
ಬಸವ ಸಂಸ್ಕೃತಿ ಕಾಣಿರೋ
ಬಸವ ಪ್ರಿಯ ಶಶಿಕಾಂತ
______________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group