ಕವನ : ಮುಂಗಾರಿನ ಮುಗುಳು

Must Read

ಮುಂಗಾರಿನ ಮುಗುಳು

ನೋಡಿರೈ ದಿಗಂತದಾಚೆ
ಮಳೆಹನಿ ರತಿರೂಪದೆ
ಬೀಸಿ ಕರೆದಂತೆ ಕೈಚಾಚಿ
ಎನ್ನ ಕವಿಮನಸು ಕರಗುತಿದೆ

ಕಳ್ಳಾಟವಿದೆ ಬಾನಂಚಲಿ
ಮತಿಗೆಟ್ಟ ದಿನಕರನಾವಳಿ
ಕೊಟ್ಟು ಹೊಂಬಣ್ಣ ಹನಿಗೆ
ಇಟ್ಟ ಕವಿಯ ಚಿತ್ತ ತಪಾಸಿಗೆ

ಬಿಸಿಲ್ಗೋಲು ಮೂಡಿದರೆ
ಮೈಮನವೆ ಹಗುರಾದಂತೆ
ನನ್ನೆದೆಯ ಇಂಗಿತಕೆ
ಹೊಸ ಜೀವ ಬಂದಂತೆ

ಮುಂಗಾರಿನ ಮುಗುಳುನಗೆಯ
ಬಲೆಗೆ ಬಿದ್ದಿದೆ ಕವಿಹೃದಯ
ಅರಿವಾಗದನುಭೋಗ ದಾಳಿಗೆ
ಸಿಲುಕಿ ಸಿಹಿ ಸಂಕಟವೆನಗೆ

ಹೇಗೆಂದು ವಿವರಿಸಲಿ
ಯಾರಲ್ಲಿ ಬಣ್ಣಿಸಲಿ
ಮನ್ಮಥನ ಮುಗುಳುಗಣೆ
ಹಿತಭಾವ ವಿಶ್ಲೇಷಣೆ

ನಿಲ್ಲದಿರೆ ಮಳೆಗಾನ
ನಿಶ್ಶಬ್ದ ಬೇಡಿಕೆ
ಕಳೆಯೆ ದುಖ-ದುಮ್ಮಾನ
ಕವಿಯ ಒಡಂಬಡಿಕೆ

ಡಾ.ಭವ್ಯ ಅಶೋಕ ಸಂಪಗಾರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group