ಕವನ : ಮೌನವ ತಬ್ಬಿಕೋ

Must Read

 ಮೌನವ ತಬ್ಬಿಕೋ

ಮೌನದೊಡವೆಯಲಿ ಸಿಂಗರಿಸಿಬಿಡು
ಧ್ಯಾನದ ಹೊನಲಲಿ ತೇಲಿಬಿಡು
ಸುಖದ ಉತ್ತುಂಗಕ್ಕೆ ಏರಬಹುದು
ಅಂತರಾಳದ ನೋವಿಗೂ ಕಸಿವಿಸಿಯಾದೀತು.

ಜಗದ ಜಂಜಡದ ನಡುವೆ
ಮೋಹದ ಬಲೆ ಸೆಳೆತಕ್ಕೆ
ವ್ಯಾಮೋಹದ ಹಂಗು ತೊರೆಯಲು
ಅಹಂಭಾವ ಗೋಡೆ ಕಳಚೀತು.

ಮಾತಿನ ಭರಾಟೆಗೆ ಬೇಸತ್ತು
ಗತ್ತಿನ ನಡೆಯ ಮೂರ್ತರೂಪಕೆ
ಮುತ್ತಿರುವ ಬಯಕೆ ಹತ್ತಿಕ್ಕಲು
ಮೌನವೆಂಬುದು ಅಗಮ್ಯ ಚೇತನವಾದೀತು.

ಕರಾಳ ಮುಖ ತಿಳಿಗೊಳಿಸಿ
ನಿರಾಳ ಬದುಕಿನ ಅರ್ಥಕಲ್ಪಿಸಿ
ಸರಳ ಜೀವನಕೆ ಅಡಿಪಾಯ ಹಾಕಲು
ಮಾತಿನ ವಿರಾಮ ಬಲ ನೀಡಿತು.

ಅಪ್ಪಿಕೋ ಮೌನ ಧ್ಯಾನವ
ತಪ್ಪಿ ನಡೆಯದಂತೆ ತಡೆಯಲು
ಬಂದುದ ಸಹಿಸುವುದಕೆ
ವಿಚಲತೆಗೆ ಕಡಿಗೀಲಾದೀತು.

ಮೌನವ ತಬ್ಬಿಕೊ
ಒಲವ ಧಾರೆ ಎರೆದು
ಗುಲ್ಲೆಬ್ಬಿಸುವದನು ತಬ್ಬಿಬ್ಬುಗೊಳಿಸಿ
ಛಲದ ಬದುಕಿಗೆ ಮುನ್ನುಡಿಯಾದೀತು.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group