ಕವನ : ಭೀಕರ ಭೂಕಂಪ

Must Read

ಭೀಕರ ಭೂಕಂಪ

ಏನು ದೈವವಿದು
ನಾವು ಬೆರೆತುಕೊಂಡು
ಹಲವು ದಶಕ
ಬದುಕು ಸಾಗಿಸುತ್ತಿರುವಾಗ
ಇಬ್ಬಾಗಿಸುವ ವಿಧಿಯೊಂದು
ಧಿಡೀರನೇ ಬಂದು ನಿಲ್ಲಬೇಕೆ ?
ಬಾಳ ಪಯಣದಲಿ
ಎಂದೂ ಕಂಡರಿಯದ
ಭೀಕರ ಭೂಕಂಪ !
ಭೂಮಿ ಬಿರಿಯಿತು
ಮೋಡ ನೆಲ ಕಚ್ಚಿತು
ಕೆಂಡದ ಮಳೆ
ಮೌನದಲಿ ಸೂರ್ಯ
ಕಣ್ಣು ಮುಚ್ಚಿದ
ದಿಕ್ಕೆಟ್ಟು ನಿಂತೆವು
ಗೂಡು ತೊರೆದು
ಸಿಹಿ ಸಂಸಾರದ
ಜೋಡು ಹಕ್ಕಿ
ಪುಟ್ಟ ಮರಿ ಅಗಲಿದವು
ಸಾವು ನೋವಿನಲ್ಲಿ
ಅಳಿದುಳಿದವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಶಿವಶಂಕರನಿಗೆ
ಭಾವ ನಮನ
ಬದುಕು ನೂಕುವುದು
ಅವನ ನೆನಪಿನಲಿ
ಅವನ ನೆನಹಿನಲಿ

_________________________

ಡಾ.ದಾಕ್ಷಾಯಿಣಿ ಮಂಡಿ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group