Homeಕವನಕವನ : ಭೀಕರ ಭೂಕಂಪ

ಕವನ : ಭೀಕರ ಭೂಕಂಪ

spot_img

ಭೀಕರ ಭೂಕಂಪ

ಏನು ದೈವವಿದು
ನಾವು ಬೆರೆತುಕೊಂಡು
ಹಲವು ದಶಕ
ಬದುಕು ಸಾಗಿಸುತ್ತಿರುವಾಗ
ಇಬ್ಬಾಗಿಸುವ ವಿಧಿಯೊಂದು
ಧಿಡೀರನೇ ಬಂದು ನಿಲ್ಲಬೇಕೆ ?
ಬಾಳ ಪಯಣದಲಿ
ಎಂದೂ ಕಂಡರಿಯದ
ಭೀಕರ ಭೂಕಂಪ !
ಭೂಮಿ ಬಿರಿಯಿತು
ಮೋಡ ನೆಲ ಕಚ್ಚಿತು
ಕೆಂಡದ ಮಳೆ
ಮೌನದಲಿ ಸೂರ್ಯ
ಕಣ್ಣು ಮುಚ್ಚಿದ
ದಿಕ್ಕೆಟ್ಟು ನಿಂತೆವು
ಗೂಡು ತೊರೆದು
ಸಿಹಿ ಸಂಸಾರದ
ಜೋಡು ಹಕ್ಕಿ
ಪುಟ್ಟ ಮರಿ ಅಗಲಿದವು
ಸಾವು ನೋವಿನಲ್ಲಿ
ಅಳಿದುಳಿದವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಶಿವಶಂಕರನಿಗೆ
ಭಾವ ನಮನ
ಬದುಕು ನೂಕುವುದು
ಅವನ ನೆನಪಿನಲಿ
ಅವನ ನೆನಹಿನಲಿ

_________________________

ಡಾ.ದಾಕ್ಷಾಯಿಣಿ ಮಂಡಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group