ಕವನ : ಕನ್ನಡವೆಂದರೆ ಪಂಚಪ್ರಾಣ

Must Read

ಕನ್ನಡವೆಂದರೆ ಪಂಚಪ್ರಾಣ

ಅನ್ನ ಅಕ್ಷರ ನೀಡಿ ಸಲುಹುತಿಹ ಕನ್ನಡಾಂಬೆಗೆ
ಜೀವ ಹೋದರೂ ಸರಿ
ತಾಯಿ ಮಾನ ಕಾಪಾಡುವ
ಗಂಡೆದೆಯ ಮಕ್ಕಳೆಂದರೆ ಅವಳಿಗೆ ಪ್ರಾಣ
ತಾಯಿ ಭುವನೇಶ್ವರಿಗೆ ನಾವೆಂದರೆ ಜೀವ
ಅದ್ಕೆ ಕನ್ನಡವೆಂದರೆ ನನಗೆ ಪಂಚಪ್ರಾಣ

ನಾಡಪ್ರೇಮವ ಮರೆತು
ಪರಭಾಷಾ ಪ್ರೇಮ ಮೆರೆಸುವವರಿಗೆ ಅವಳದೊಂದು
ಕಿವಿಮಾತು
ತಾಯಿನುಡಿಯ ಮರೆತ ಜನ ಹೆತ್ತ ತಾಯಿಯನ್ನು ಮರೆಯದಿರುವರೇ?
ಇಲ್ಲಿರುವ ಸೌಭಾಗ್ಯ ಬೇರೆಲ್ಲೂ ಕಾಣೆನು
ಅದ್ಕೆ ಕನ್ನಡವೆಂದರೆ ಪಂಚಪ್ರಾಣ

ನಮ್ಮ ಬದುಕಿಗೆ ಆಧಾರ ಕನ್ನಡ
ಉಸಿರಿಗೆ ಉಸಿರಾಗಿಹುದು ಕನ್ನಡ
ಈ ತಾಯ್ನೆಲ ಅಮೂಲ್ಯ ರತ್ನದ ಗಣಿ
ಏಳೇಳು ಜನ್ಮದಲ್ಲೂ ಈ ನಾಡೇ ನನಗೇ ದೇವಲೋಕ
ಅದ್ಕೆ ಕನ್ನಡವೆಂದರೆ ಪಂಚಪ್ರಾಣ

ಏನಿದ್ದರೇನ್ ಪರನಾಡಿನಲ್ಲಿ ಇಲ್ಲಿರುವ ಸ್ವರ್ಗ ಸುಖ ಬೇರೆಲ್ಲೂ ಸಿಗದು
ನುಡಿದರೆ ಮುತ್ತು ಮಾಣಿಕ್ಯದ ದೀಪ್ತಿಯಂತಿರುವ ಸುಮಧುರ ಭಾಷೆ ನಮ್ಮೀ ಕನ್ನಡ
ಜೇನಿನ ಮಾಧುರ್ಯ ಹಾಲಿನ ಹೊಳೆಯ ಹರಿಸುವ ನುಡಿಯಿದು ಅದ್ಕೆ
ಕನ್ನಡವೆಂದರೆ ಪಂಚಪ್ರಾಣ

ಕನ್ನಡವೆಂದರೆ ಮೂಗು ಮುರಿಯುವುದಲ್ಲ
ಮೊಗವೆತ್ತಿ ನಿಲ್ಲುವುದು
ಕನ್ನಡವೆಂದರೆ ಅಸಹ್ಯವಲ್ಲ
ಸಿಹಿ ಬದುಕಿನ ದೇವನುಡಿ
ಕನ್ನಡ ಸಪ್ತ ಕೋಟಿ ಕನ್ನಡಿಗರ ಹೃದಯ ಸಾಮ್ರಾಟ
ಕನ್ನಡವನುಳಿದು ಬೇರೆ ಬದುಕಿಲ್ಲ
ಅದ್ಕೆ
ಕನ್ನಡವೆಂದರೆ ನನಗೆ ಪಂಚಪ್ರಾಣ

✍️✍️ ಶಿವಕುಮಾರ ಕೋಡಿಹಾಳ, ಕನ್ನಡ ಪ್ರಾಧ್ಯಾಪಕರು ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group