ಕವನ : ಉಸಿರಾದವರು

Must Read

 ಉಸಿರಾದರು

ಮಕ್ಕಳಿಲ್ಲೆಂಬ ಕೂರಗಿನಿಂದ ನೊಂದರು
ಬೇಸತ್ತ ಗಂಡ ಹೆಂಡತಿ ಇಬ್ಬರು
ರಸ್ತೆಬದಿಯಲ್ಲಿ ಗುಂಡಿ ತೋಡಿದರು
ಗಿಡ ನೆಟ್ಟು ನೀರುಣಿಸಿದರು

ಗಿಡ ಬೆಳೆದು ಮರವಾಗುವುದ ಕಂಡರು
ಅವುಗಳನ್ನೇ ಮಕ್ಕಳೆಂದು ನಂಬಿದರು
ಸಂತೋಷದಿ ಕಾಯಕ ಮುಂದುವರಿಸಿದರು
ಎಂಟು ಸಾವಿರ ಮರಗಳ ಬೆಳೆಸಿದರು

ನಾಡಿಗೇ ಹಸಿರಿನಿಂದ ಉಸಿರಾದರು
ಸಾಲುಮರದ ತಿಮ್ಮಕ್ಕ ನೆಂದು ಬಿರುದು ಪಡೆದರು
ವೃಕ್ಷಮಾತೆ ಎಂದು ಹೆಸರಾದರು
ಸಾವಿರಾರು ಪ್ರಾಣಿ ಪಕ್ಷಿಗಳಿಗೆ ನೆಲೆ ನೀಡಿದರು

ಓದು ಬರಹ ಕಲಿತಿಲ್ಲ ಇವರು
ನಿರ್ಮಲ ಮನಸ್ಸುಳ್ಳವರು
ನಿಸ್ವಾರ್ಥ ಸೇವಾ ಭಾವನೆ ಉಳ್ಳವರು
ಯಾರಿಂದಲೂ ಏನನ್ನು ಬಯಸದವರು

ಈ ನಿಸ್ವಾರ್ಥ ಸೇವೆಗೇ ರಾಷ್ಟ್ರಪತಿಯಿಂದ
ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಪಡೆದವರು
ತಮ್ಮ ಆಸ್ತಿಯನ್ನು ಶಾಲೆಗೇ ಧಾರೆ ಎರೆದವರು
ನೀವು ನೆಟ್ಟ ವೃಕ್ಷಗಳು ನಿಮಗಾಗಿ ಕಾಯುತ್ತಿವೆ
ಮತ್ತೂಮ್ಮೆ ಹುಟ್ಟಿ ಬನ್ನಿ ವೃಕ್ಷಮಾತೆ ನಿಮಗೇ ಕೋಟಿ ಕೋಟಿ ನಮನಗಳು

ಸೌಭಾಗ್ಯ ಅಶೋಕ ಕೊಪ್ಪ, ಗೋಕಾಕ

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group