ಕವನ : ಹೆಸರಾಗಲಿ ಲಿಂಗಾಯತ

Must Read

ಹೆಸರಾಗಲಿ ಲಿಂಗಾಯತ

 

ಹೆಸರಾಗಲಿ ಲಿಂಗಾಯತ
ಉಸಿರಾಗಲಿ ಬಸವಣ್ಣ
ಗುರು ಲಿಂಗ ಜಂಗಮ
ಹುಸಿ ಹೋಗದ ಸಂಗಮ

ನಿತ್ಯದಲಿ ಕಾಯಕವು
ನಿರಂತರ ದಾಸೋಹ
ಬಸವಾಕ್ಷರವೇ ಮಹಾಮಂತ್ರ
ಶ್ರಮ ಸಂಸ್ಕೃತಿ ಪೂಜೆಯು

ಚೆನ್ನ ಕಕ್ಕ ಮಾಚ ಹರಳ
ನೀಲ ಗಂಗಾ ಅಕ್ಕ ನಾಗಮ್ಮ
ಹಾಸಿ ದುಡಿದರು ಜಗದ ಏಳಿಗೆ
ಹಂಚಿ ತಿಂದರು ಬಾಳಿಗೆ

ವಚನ ಹಿಡಿದು ಗೆದ್ದರು
ಸತ್ಯ ಸಮತೆ ಪ್ರೀತಿಯು
ಸಮರತಿ ಸಮಕಳೆ ಜೀವ
ಅರಿವು ಪ್ರಸಾದ ನಾಳಿಗೆ

ಕಟ್ಟ ಬೇಕು ಕಲ್ಯಾಣ
ವಿಶ್ವ ಪಥದ ಮನುಕುಲ
ಅಲ್ಲಮಾದಿ ಶರಣರಿಗೆ
ಎತ್ತ ಬೇಕು ಆರುತಿ

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group