ಕವನ : ದೂರಾದ ಚೆಲುವೆ

Must Read

ದೂರಾದ ಚೆಲುವೆ

ಮನಸಿನಾಳದಲಿ ಬೇರುಬಿಟ್ಟು
ಹೃದಯದಲಿ ಆಸೆಯ ಹಂದರ ಹಚ್ಚಿ
ಕನಸು ಕೈಗೂಡುವ ಮುನ್ನ
ಗಗನ ಕುಸುಮವಾಗಿ
ಚಿತ್ತಚೋರನಿಂದ ದೂರವಾದ ಒಲವೇ
ನಿನ್ನಿನಿಯನ ಬದುಕು ಬೇಡವಾಯಿತೇ?

ಗಾಳಿ ಬೀಸಿದಾಗೊಮ್ಮೆ ನೆನಪು ಉಮ್ಮಳಿಸಿ
ಬಿಕ್ಕುತಿದೆ ಮನ
ಮೋಡ ಕವಿದಾಗೆಲ್ಲಾ ನೆನಪಾಗುತಿದೆ ಮೌನ
ಸಾನ್ನಿಧ್ಯ ಬಯಸಿದೆ
ಹೃದಯ ಹಗುರಾಗಲು
ನಿನ್ನೆಯ ನೆನಪಿಗಿಂತ
ಬಲು ಕಷ್ಟವಿಂದು
ತಾಳಲಾರೆ ವಿರಹ ಕಣ್ಣಂಚಿನಲಿ ಜಾರುತಿದೆ ಬಿಂದು
ಅಂಬರದ ಹೂವಿಗೆ
ಭುವಿಯ ಸ್ಪರ್ಶ ಬೇಡವಾಯಿತೇ?

ತೋಳಬಂದಿಯ ಸಾನ್ನಿಧ್ಯದಲಿ ಲೋಕ ಮರೆಸಿದ್ದೆ
ಕಣ್ಣುಗಳ ನೋಟದಲಿ ಎಲ್ಲಾ ಅರಸಿದ್ದೆ
ಮರಳುಗಾಡಿನಲ್ಲಿ ಅಲೆಯುತ್ತಿದ್ದರೂ
ಓಯಸಿಸ್ ಆಗಿದ್ದೆ
ಜೀವದ ಕಣಿಯಾಗಿದ್ದೆ
ಈ…ಗ…ಈ…ಗ… ಈಗ…

✍️✍️ ಶಿವಕುಮಾರ ಕೋಡಿಹಾಳ ಮೂಡಲಗಿ

LEAVE A REPLY

Please enter your comment!
Please enter your name here

Latest News

ಓಂ ಸಂತಾಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರದಾನ

ಮೂಡಲಗಿ : ಇತ್ತೀಚೆಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್...

More Articles Like This

error: Content is protected !!
Join WhatsApp Group