ಕವನ : ರೈತನಿವನು

Must Read

ರೈತನಿವನು

ರೈತನಿವನು ಮೊದಲ ತಾಯಿಯ ಧರೆಯ ಮಗನು
ತಾಯ ಒಡಲಲ್ಲಿ ಬಿತ್ತಿ ಬೆಳೆವ
ಬಲು ಸೊಗಡುಗಾರನು
ವಸುಧೆಯೊಳು ಜನಿಸಿ ವಸುಧೆಯೊಳು ಸೇರುವ
ಮಣ್ಣಿನ ಮಗನು

ಮಮತೆಯಿಂದಲೇ ಸಾಕಿ ಸಲವುವ ಜೋಡೆತ್ತು
ಹೊಡೆವ ಕುಂಟೆಗೆ
ತಲೆಯ ಕೊಟ್ಟವು
ಭಾರ ಎಳೆಯುವ ಮೂಕ ಪ್ರಾಣಿಗಳು

ನೆಲವ ಹದಗೊಳಿಸಿ ನೀರು ಹಾಸಿ
ಬೆಳೆವ ಬಂಗಾರ ಮಣ್ಣು ಕಣ ರಾಶಿ
ಅವರೆ ಅಲಸಂದಿ ಜೋಳ ಗೋದಿ
ಹೆಸರು ಕಡಲೆ ತೊಗರಿ ಮಡಿಕೆ
ಶೇಂಗಾ ಹತ್ತಿ ಗೊಂಜಾಳ ರಾಗಿ
ನಮ್ಮ ರೈತನ ಬದುಕು ಬೆಳೆಯು

ಕುಳಿತು ಓದದೇ ಹಂತಿ ಹಾಡು
ಮೋಡ ಕರಗಿ ಮಳೆಯು ಸುರಿದರೆ
ಮೊಗವು ಅಂದ ನಾಡು ಚೆಂದ
ಹಸಿರು ಹುಲ್ಲು ದನ ಕರು
ಆಡು ಕುರಿ ಆಕಳು ಎತ್ತು ಎಮ್ಮೆಗಳಿಗೆ ಆಹಾರವು

ಹಿಂಡಿ ಬೆಲ್ಲ ದನಕ್ಕೆ ತಿನಿಸಿ ಬೆಳೆಸಿ
ತನ್ನ ಹೆಂಡತಿ ಮಕ್ಕಳು ಸಂಸಾರ
ದಿನದ ಊಟಕೆ ರಾತ್ರಿ ಹಗಲು
ಬೆವರು ಸುರಿಸಿ ದುಡಿದ ಫಸಲಿಗೆ
ಬೆಲೆಯು ಬಾರದೇ
ಚಿಂತೆಯೊಳಗೆ ಸುಡುಗಾಡು
ಸೇರುವ
ರೈತನ ಬದುಕೇ ದುಸ್ತರ

ಸಾವಿತ್ರಿ ಕಮಲಾಪೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group