ಕವನ : ಶ್ರೀ ಗುರು ಗವಿ ಸಿದ್ದೇಶ

Must Read

ಶ್ರೀ ಗುರು ಗವಿಸಿದ್ಧೇಶ

ಕೊಪ್ಪಳದ ಗವಿಮಠದ ಕಳಸ
ಮಾನವತೆಯ ಮಂದಾರ
ಭೂಲೋಕದ ಅನರ್ಘ್ಯ ರತ್ನ
ಸಕಲರಿಗೂ ಕಾಮಧೇನು
ಕನ್ನಡ ನಾಡಿನ ಮೇರುತೇರು
ಶ್ರೀ ಗುರು ಗವಿಸಿದ್ಧೇಶ

ಬಳಲಿ ಬಂದ ಭಕ್ತರಿಗೆ
ನುಡಿಗಳೇ ಅಮೃತ ತೀರ್ಥ
ಬದುಕು ಕಲಿಸುವ
ನಿಮ್ಮ ಅಂತಃಕರಣ
ನುಡಿಗಳೇ ದೈವ ತೋರಣ
ಕಷ್ಟಗಳಿಗೆ ದಿವ್ಯೌಷಧ ನೀಡಿ
ಬಾಳು ಬೆಳಗುವ ಸಂಜೀವಿನಿ
ಶ್ರೀ ಗುರು ಗವಿಸಿದ್ಧೇಶ

ಹೊಟ್ಟೆಗೆ ಅನ್ನವ ನೀಡಿ
ಮಸ್ತಕಕ್ಕೆ ಜ್ಞಾನ ನೀಡುವ
ಕಾರ್ಯ ಜಗವಂದಿತ
ಸಂಸ್ಕಾರ ಸಂಸ್ಕೃತಿಯ ಕೈಂಕರ್ಯದಲಿ ಲೋಕ ಬೆಳಗುವಿರಿ
ವಿಶ್ವವಂದಿತ ಜ್ಯೋತಿ
ಸಕಲ ಕಲ್ಯಾಣ ಮೂರುತಿ
ಮಾತೃ ಹೃದಯದ ದೇವತೆ
ಶ್ರೀ ಗುರು ಗವಿಸಿದ್ಧೇಶ

ಜಗವು ಹಾಳು ಹರಟೆ
ಬದುಕೊಂದು ಮೂರಾಬಟ್ಟೆ
ಎಂದವರಿಗೆ ಸುಖ ದುಃಖಗಳ
ಸಮಾನತೆಯ ಮಂತ್ರ ಕಲಿಸಿಕೊಟ್ಟ ಗುರು
ನಮ್ಮ ಪಾಲಿನ
ದೇವತಾ ಮನುಷ್ಯ
ಎಲ್ಲರ ಬಾಳಿನ ಬೆಳಕಾಗಿರುವೆ

ನಾ ಅನುಭಾವಿಸುವೆ ಪ್ರತಿದಿನ ಪ್ರತಿಕ್ಷಣ ನಿನ್ನೊಳು
ಲೀನವಾಗಲಿ ನನ್ನೀ ಮನ ನಿನ್ನ ಅಂತರಂಗದ ಕೋಣೆಯಲಿ
ದಿವ್ಯಾನಂದದ ಅನುಭೂತಿ ದಯಪಾಲಿಸು ಪಾವನ ಮೂರ್ತಿ
ಶ್ರೀ ಗುರು ಗವಿಸಿದ್ಧೇಶ

✍️ ಶಿವಕುಮಾರ ಕೋಡಿಹಾಳ
ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group