ಕವನ : ಶ್ರದ್ಧೆ

Must Read

ಶ್ರದ್ಧೆ

ಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ,
ಸಾಧನೆಯ ಕೀಲಿ ಕೈ ಆಗಿದೆಯಲ್ಲ
ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ
ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ
ಹೆಜ್ಜೆಗೆ ದಿಕ್ಕು ತೋರುವ ಬೆಳಕ
ಸಾಧನೆಯ ಹಾದಿಯ ದೀಪಿಕೆ

ಶ್ರದ್ಧೆಯೇ ಧೈರ್ಯದ ನೆರಳು.
ಸೋಲಿನ ಕ್ಷಣದಲ್ಲಿ ಕುಗ್ಗದ ಹೊನಲು
ಅದು ಹೊಸ ಪ್ರೇರಣೆ
ಮಣ್ಣಿನಲ್ಲಿ ಯಶಸ್ಸಿನ ಬೀಜ
ಫಲದ ನಿರೀಕ್ಷೆ ಇಲ್ಲದ ನಂಬಿಕೆ
ಶ್ರಮದ ಜೊತೆಗಿನ ಶಕ್ತಿ
ಕಾಲದಲ್ಲಿ ಸುವರ್ಣ ಫಲ

ಶ್ರದ್ಧೆಯಿಲ್ಲದ ಜ್ಞಾನ ನಿರ್ಜೀವ,
ಸಾಧನೆಗೂ ಕರ್ಮ ಪವಿತ್ರ.
ಜೀವನದ ಪ್ರತಿ ಹಂತದಲ್ಲೂ
ಅದೇ ಅಮೂಲ್ಯ ಆಭರಣ.
ಮನುಷ್ಯನನ್ನು ಎತ್ತರಕ್ಕೆ
ಅವನ ಶಕ್ತಿ ಅಲ್ಲ, ಭಾಗ್ಯವೂ ಅಲ್ಲ,
ಅವನೊಳಗಿನ ಶ್ರದ್ಧೆಯೇ
ಭಾವ ಭವಿಷ್ಯವನ್ನು ರೂಪಿಸುವ
ಸ್ವಯಂ ಶಿಲ್ಪಿ
ಶೃದ್ಧೆ ತಪಸ್ಸು
ಅಂತರಂಗದ ಚೈತನ್ಯದ ಚಿಲುಮೆ
_________________________

ಡಾ.ತಾರಾ ಬಿ ಎನ್ ಧಾರವಾಡ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group