ಕವನ : ಸತ್ಯವನ್ನು ಹೇಳುತ್ತೇವೆ

Must Read

ಸತ್ಯವನ್ನು ಹೇಳುತ್ತೇವೆ

ಕವನಗಳು
ಬುಲೆಟ್ ತಡೆದು
ನಿಲ್ಲಿಸಲಾರವು
ಕಾದಂಬರಿ
ಬಾಂಬ್ ಗಳನ್ನು
ನಿಷ್ಕ್ರಿಯ ಮಾಡುವದಿಲ್ಲ
ಕಥೆಗಳು ದೊಣ್ಣೆಯನ್ನು
ಮುರಿಯಲಾರವು
ಲಘು ಸಾಹಿತ್ಯ
ಖಡ್ಗ ಕಠಾರಿ
ಕೊಲೆ ಹಿಂಸೆ
ನಿಯಂತ್ರಣ ಮಾಡಲಾರವು.
ಪೂಜೆ ಪ್ರಾರ್ಥನೆ
ಯುದ್ಧವನ್ನು ನಿಲ್ಲಿಸಲಾರವು
ನಾವು ಸತ್ಯವನ್ನು ಹೇಳುತ್ತೇವೆ.
ಸಾಯುವ ಮುನ್ನ
ಸುಳ್ಳು ಹೇಳುವವರ
ಮೋಸ ಮಾಡಿದವರ
ಧರ್ಮದ ಹೆಸರಿನಲ್ಲಿ
ಸುಲಿಗೆ ಮಾಡುವವರ
ಯುದ್ಧ ರಕ್ತ ಬೀಜಾಸುರರ
ಹೆಸರು ಹೇಳುತ್ತೇವೆ.
ಹುಟ್ಟಿ ಬರಲಿ
ಚೇಗುವಾರ ಭಗತ್
ಬುದ್ಧ ಮತ್ತೆ ನಗಲಿ
ಬಸವ ಭಾರತ ಗೆಲ್ಲಲಿ
ಇಂಕ್ವಿಲಾಬ್ ಜಿಂದಾಬಾದ್
———————————-
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group