ಕವನ : ಸತ್ಯವನ್ನು ಹೇಳುತ್ತೇವೆ

Must Read

ಸತ್ಯವನ್ನು ಹೇಳುತ್ತೇವೆ

ಕವನಗಳು
ಬುಲೆಟ್ ತಡೆದು
ನಿಲ್ಲಿಸಲಾರವು
ಕಾದಂಬರಿ
ಬಾಂಬ್ ಗಳನ್ನು
ನಿಷ್ಕ್ರಿಯ ಮಾಡುವದಿಲ್ಲ
ಕಥೆಗಳು ದೊಣ್ಣೆಯನ್ನು
ಮುರಿಯಲಾರವು
ಲಘು ಸಾಹಿತ್ಯ
ಖಡ್ಗ ಕಠಾರಿ
ಕೊಲೆ ಹಿಂಸೆ
ನಿಯಂತ್ರಣ ಮಾಡಲಾರವು.
ಪೂಜೆ ಪ್ರಾರ್ಥನೆ
ಯುದ್ಧವನ್ನು ನಿಲ್ಲಿಸಲಾರವು
ನಾವು ಸತ್ಯವನ್ನು ಹೇಳುತ್ತೇವೆ.
ಸಾಯುವ ಮುನ್ನ
ಸುಳ್ಳು ಹೇಳುವವರ
ಮೋಸ ಮಾಡಿದವರ
ಧರ್ಮದ ಹೆಸರಿನಲ್ಲಿ
ಸುಲಿಗೆ ಮಾಡುವವರ
ಯುದ್ಧ ರಕ್ತ ಬೀಜಾಸುರರ
ಹೆಸರು ಹೇಳುತ್ತೇವೆ.
ಹುಟ್ಟಿ ಬರಲಿ
ಚೇಗುವಾರ ಭಗತ್
ಬುದ್ಧ ಮತ್ತೆ ನಗಲಿ
ಬಸವ ಭಾರತ ಗೆಲ್ಲಲಿ
ಇಂಕ್ವಿಲಾಬ್ ಜಿಂದಾಬಾದ್
———————————-
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group