spot_img
spot_img

ಕವನ : ವೀರಗಾಥೆ

Must Read

- Advertisement -

ವೀರಗಾಥೆ

ವೀರ ಯೋಧರಿಗೊಂದು ನನ್ನ ನುಡಿ ನಮನ

ಕೇಳಿರಿ ಭಾರತೀಯರೇ ಕೆಚ್ಚೆದೆಯ ವೀರರ ಕಥೆಯನ್ನ
ನುಸುಳಿ ಬಂದ ಪಾಕಿಸ್ತಾನಿಯರ  ಹೊಸಕಿ ಹಾಕಿದ ಗಾಥೆಯನ್ನ //

- Advertisement -

ಬೆನ್ನಿಗೆಂದೂ ಇರಿಯೆವು ಎದುರಿಗೆ ಬಂದರೆ ಬಿಡೆವು
ನಾವು ಕೆಚ್ಚೆದೆಯ ಭಾರತೀಯ ವೀರರು ಸೈನಿಕರು
ಕದನಕ್ಕಿಳಿದರೆ ಗೆಲ್ಲದೆ ಇರಲಾರೆವು ನಾವು ಇರಲಾರೆವು
ವೈರಿಗಳ ಕೊಚ್ಚದೆ ಇರಲಾರೆವು ನಾವು ಬದುಕಲಾರೆವು//

ಭಾರತೀಯರು ನಾವು ಗಂಡೆದೆ ಹುಲಿಗಳು
ತಡವಿದರೆ ಬಿಡಲೊಲ್ಲೆವು ಗೆಲ್ಲದೆ ಇರಲಾರೆವು
ಎದೆ ಬಗೆದರೂ ಗುಂಡಿಗೆ ಒಡೆದರು ಒಂದೇ ಮಾತರಂ
ಎನ್ನುತಲೇ ಇರುವೆವು ನಾವು ಭಾರತೀಯರು//

ನುಸುಳಿದರಂದು ಪಾಕಿಸ್ತಾನಿ ಅರೆಸೇನೆ
ಜೊತೆಗೆ ಉಗ್ರಗಾಮಿಗಳೆಂಬ ನರರಕ್ಕಸರು
ನಡೆಯಿತಂತೆ ಭಾರತ ಪಾಕಿಗೆ ಸಶಸ್ತ್ರ ಸಂಘರ್ಷವು
ಕಾಶ್ಮೀರ ಭಾರತದ ಶಿಖರದ ಅಡಿಯಲ್ಲಿ ಯುದ್ಧವು//

- Advertisement -

ಭಾರತೀಯ ಗಸ್ತು ಪಡೆಗೆ ಹೊಂಚು ತಿಳಿದಿತ್ತು
ವಾಯುಪಡೆಯು ಯುದ್ಧಕ್ಕೆ ಸಣ್ಣದ್ದವಾಗಿತ್ತು
ಪರ್ವತ ಚ್ಛಾದಿತ ಪ್ರದೇಶದಲ್ಲಿ ಕಾದಾಟ ನಡೆದಿತ್ತು
ಭಾರತ ಕಳಸ ಕಶ್ಮೀರಕ್ಕಾಗಿ ಯುದ್ಧ ರಭಸದಿ ನಡೆದಿತ್ತು//

ಮೇಘದೂತ್ ಸಿಯಾಚಿನ್ ನೀರ್ಗಲ್ಲು
ಎಂದೆಂದಿಗೂ ಭಾರತೀಯರ ಸ್ವತ್ತು
ಎದುರಿಸಿ ನಿಲ್ಲುವೆವು ಬರುವ ಎಲ್ಲಾ ಆಪತ್ತು ಎಂದರು
ಸುರುವಾಯಿತು ಕುತಂತ್ರ ಹೂಡಿದ ಪಾಕಿಸ್ತಾನಿ ಸೈನಿಕರ ಗಸ್ತು//

ಸೆರೆ ಹಿಡಿದು ಕೊಂದರು ಅನೇಕ ಭಾರತ ಸೈನಿಕರ
ಯುದ್ಧ ಸಾಮಗ್ರಿಗಳ ಕೆಡಿಸಿದರು ಒಡೆದರು
ರೊಚ್ಚಿಗೆದ್ದ ಭಾರತದ ಸೈನಿಕರು ಹೋರಾಟಕ್ಕೆ
ತೊಡೆತಟ್ಟಿ ನಿಂತರು ನಮ್ಮ ವೀರ ಶೈನಿಕರು
ಭಾರತಾಂಬೆಯ ಮಕ್ಕಳು ಹೆಮ್ಮೆಯ ಮಕ್ಕಳು//

ಒಬ್ಬರ ಮೇಲೊಬ್ಬರಂತೆ ಸೈನಿಕರ ಸಾವುಗಳು
ಆಕ್ರಮಣಕ್ಕೆ ನಾಂದಿ ಹಾಡಿದರು
ಕ್ಯಾಪ್ಟನ್ ಕರ್ನಲ್ಗಳ ವೀರ ಮರಣ
ನಡೆಯಿತು ಎಂದಿಲ್ಲದ ಮಾರಣಹೋಮ
ಏನೇ ಆದರೂ ನಿಲ್ಲಲಿಲ್ಲ ಕಾದಾಟ ಸೆಣಸಾಟ//

ಫಿರಂಗಿ ದಾಳಿ ಮದ್ದು ಗುಂಡುಗಳು ಸುರಿದವು
ರಕ್ತ ತರ್ಪಣ ಜೀವ ಅರ್ಪಣ ಆಗಲಿ ಮರಣ
ಅತಿಕ್ರಮಿಸಿದ ಪ್ರದೇಶ ವಶಪಡಿಸಿಕೊಳ್ಳದೆ ಬಿಡೆವು
ಹೆಂಡತಿ ಮಕ್ಕಳು ತಾಯಿ ತಂದೆ ಕಾಣಲಿಲ್ಲ
ವೀರರ ಕಣ್ಣಿಗೆ ಕಂಡಿದ್ದೊಂದೇ ಗೆಲುವಿನ ಗುರಿ //

ಹಿಮದ ಬಂಡೆಗಳ ಅಡಿಯಲ್ಲಿ ಘೋರ ಯುದ್ಧ
ನೆಲಬಾಂಬುಗಳೇ ಇರಲಿ ಗುಂಡುಗಳೆ ಹಾರಲಿ
ತಲೆಯೋಡ್ಡಿ ತಡೆಯುವೆವು ಅತಿಕ್ರಮಣ ನಿಲ್ಲಿಸುವೆವು
ಮೋಸದ ಸಂಚು ಕುತಂತ್ರವ ಉಗ್ರರ ಅಟ್ಟಹಾಸವ
ಎನ್ನುತ ವ್ಯೊಹ ರಚಿಸಿದರು ಮುತ್ತಿಗೆಯನ್ನು ಹಾಕಿದರು //

ಸಾವು ನೋವುಗಳ ಸಹಿಸಿ ಸಿಡಿದೆದ್ದು ನಿಂತರು
ಮೂರು ತಿಂಗಳುಗಳ ಕಾಲ ಎಲ್ಲೆಲ್ಲೂ ಕೋಲಾಹಲ
ಉರುಳಿದವು ಹೆಣಗಳು ಕೆರಳಿದವು ಭಾರತೀಯ ಮನಗಳು
ಮೋಸಕ್ಕೆ ಪ್ರತಿಕಾರ ವಿರೋಧ ನಿಲ್ಲದ ಯುದ್ಧ
ಮಂಕಾದವು ಪಾಕಿಸ್ತಾನಿ ಮುಖಂಡರ ಮುಖಗಳು//

ಮೋಸದ ಸಂಚು ನಿಲ್ಲದೆಂಬ ಮಾತು ಸತ್ಯವಾಯಿತು
ಮಾಡಿದ್ದುಣ್ಣೋ ಮಾರಾಯ ಎಂಬ ಗಾದೆ ಮೆರೆಯಿತು
ಎದೆ ಬಗೆದರೂ ಗುಂಡಿಗೆ ಒಡೆದರು ವಂದೇ ಮಾತರಂ ಎನ್ನುವೆವು
ಜೀವವಿರುವವರೆಗೆ ತಾಯಿ ಸೇವೆ ಮಾಡುವೆವು
ಎಂದರು ಭಾರತೀಯ ಸೈನಿಕರು,ವೀರ ಸೈನಿಕರು//

ಭಾರತದ ಧ್ವಜ ಹಾರಿಸಿದರು ಜೈ ಜೈಕಾರ
ವಂದೇ ಮಾತರಂ ಭಾರತ್ ಮಾತಾ ಕಿ ಜೈ ಎಂದರು
ಎಲ್ಲೆಲ್ಲೂ ವೀರಘೋಷಗಳು ಗೆಲುವಿನ ಜಯಕಾರ
ಹಾರಿಸಿದರು ವೀರ ಪತಾಕೆ ಏರಿಸಿದರು
ಕಾಶ್ಮೀರದಲ್ಲಿ ಕೇಸರಿ ಬಿಳಿ ಹಸಿರಿನ ದ್ವಜ ಅಂದೇ//

ತ್ಯಾಗ ಬಲಿದಾನಗಳು ಸಾರ್ಥಕವಾದವು
ಹರಸಿದ ತಾಯಿ ಹೆಂಡತಿಯರ ಮುಖ ಅರಳಿದವು
ಎಲ್ಲೆಲ್ಲೂ ಆರತಿ ಭಾರತಾಂಬೆಗೆ ಆರತಿ
ವೀರ ಪುತ್ರರಿಗೆ ಕಂಚಿನ ಆರತಿ ಬೆಳಗಿದರು ಮೆರೆಸಿದರು //

ಉಳಿದರಂದೇ ಭಾರತೀಯರ ಎದೆಯೊಳಗೆ ಹುತಾತ್ಮರು
ಅಚ್ಚಾದರಂದೇ ಕೆತ್ತಿದರಿವರ ಹೆಸರುಗಳ
ವೀರಗಲ್ಲುಗಳ ಮೇಲೆ ಉಳಿಯಿತು ಸತ್ಯ
ಅಳಿಯಿತು ಅಸತ್ಯ ಭೂಮಿ ಇರುವವರೆಗೆ
ಮರೆಯದ ಹೋರಾಟ ನಡೆಸಿದರು ಹಸಿರಾದರು
ಭಾರತೀಯರ ಹೆಸರಾದರು//

ಡಾ ಅನ್ನಪೂರ್ಣ ಹಿರೇಮಠ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group