ಕವನ : ಕೊರಳ ಕೊಟ್ಟರು ಕುಣಿಕೆಗೆ

Must Read

ಕೊರಳ ಕೊಟ್ಟರು ಕುಣಿಕೆಗೆ

ತಾಯ ಕೊರಳ ಮುರಿಯ
ಬಂದ ಅರಿಯ ಕಂಡು
ರುಧಿರ ಕುದಿದು
ಕರುಳ ತರಿದು
ಸಿಡಿಲ ಮರಿಗಳು
ಕೊಟ್ಟರವರು ಕೊರಳ ಕುಣಿಕೆಗೆ…

ದಾಸ್ಯ ಶೃಂಖಲೆ ಬಿಡಿಸಿ
ಭಾರತಿಯ ಮಡಿಲ
ಪುತ್ರರು ವೀರ ಶೂರರು
ಎದೆಯ ಗುಂಡಿಗೆಯ
ಗುಂಡಿಗೊಡ್ಡಿ ಅಮರರಾಗಿ
ಕೊಟ್ಟರವರು ಕೊರಳ ಕುಣಿಕೆಗೆ…

ನೆಲದ ಮಣ್ಣು ಕಣ್ಣು ತೆರೆದು
ಕೈ ಬೀಸಿ ಕರೆಯಲು
ಗಡಿಯ ಮೆಟ್ಟಿ ಒಡಲ
ಬಗೆಯ ಬಂದವರ
ಎದೆಯ ಸೀಳುತ
ಕೊಟ್ಟರವರು ಕೊರಳ ಕುಣಿಕೆಗೆ…

ಅವ್ವನ ಕಾಲಿಗೆ ಬೇಡಿ ತೊಡಿಸಿ
ಆಳ ಬಂದವರ ತಡೆದು
ಒಡೆದು ಆಳುವ ನೀತಿ ಮುರಿದು
ತಮ್ಮ ಬಾಳ ಮುಡಿಪ ಮಾಡಿ
ವೀರಪುತ್ರರು ದೇಶಭಕ್ತರು
ಕೊಟ್ಟರವರು ಕೊರಳ ಕುಣಿಕೆಗೆ…

ತ್ಯಾಗ ಬಲಿದಾನ ಸತ್ಯ
ಅಹಿಂಸೆ ಸತ್ಯಾಗ್ರಹ
ಮಾರ್ಗದಲಿ ನಡೆದು
ಸ್ವಾತಂತ್ರ್ಯ ಜ್ಯೋತಿ
ಬೆಳಗಲೆಂದು ನಾಡಿಗಾಗಿ
ಕೊಟ್ಟರವರು ಕೊರಳ ಕುಣಿಕೆಗೆ…

ಇರುಳು ಕಳೆದು ಬೆಳಕು
ಹರಿದು ನಗಲು ಮೊಗವು
ತಾಯಿ ಭಾರತಿಯ ಮನವು
ಸ್ವಾತಂತ್ರ್ಯ ಮುತ್ತಿ ಮುಗಿಲು
ಹರಿಯೆ ಹರುಷ ಹೊನಲು
ಕೊಟ್ಟರವರು ಕೊರಳ ಕುಣಿಕೆಗೆ..

 

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group