ಕವನ : ಮೌನರಾಗ ಹೊಸದಾಗಿದೆ……

Must Read

ಮೌನರಾಗ ಹೊಸದಾಗಿದೆ…..

ಮನದಾಳದಲಿ ಮೂಡಿಬಂದಿದೆ ಹೊಸರಾಗ
ಪಿಸುಗುಟ್ಟುತಲಿ ಉಲಿಯುತಲಿದೆ ಮೌನರಾಗ

ಬಾಳಿನಾ ತೋಟದಲಿ ಅರಳಿದ ಹೂವು
ಘಮ್ಮೆಂದು ಸೂಸುತಿದೆ ತನದೆ ಸುವಾಸನೆ
ಬಾಡುವೆನೆಂದು ಹೇಳುವುದಿಲ್ಲ ಎಂದೂ
ಇರುವಷ್ಟು ಸಮಯ ಖುಷಿ ನೀಡುವುದು ಕಾಣಾ

ಕಳೆದಾ ಸಮಯ ಕಂಡಾ ಕನಸು
ಮರೀಚಿಕೆಯಾಗಿ ನಿಂತಿದೆಯಲ್ಲಾ
ಮನದಾಳದ ಮಾತು ಹೃದಯದಾ ತುಡಿತ
ಮೌನವಾಗಿ ಬಿಕ್ಕಳಿಸುತಿದೆಯಲ್ಲಾ..

ನಾನು ನೀನು ಕಳೆದಾ ಕ್ಷಣಗಳಲಿ
ಪಿಸುಮಾತು ಮೌನರಾಗವೇ ಜಾಸ್ತಿ
ಅದರಲೂ ತುಡಿತಗಳೇ ನಮ್ಮ ಆಸ್ತಿ
ಹೇಗೆ ಕಳೆದು ಹೋಯ್ತು ಹಗಲು ಹೊತ್ತು.

ಕತ್ತಲಾವರಿಸಿದ ಮನಕೆ ಮುದ ನೀಡದು ಬಯಕೆ
ಹೊಸತು ಹಳೆಯದರ ಭರಾಟೆಯಲಿ
ಬಾಳಬಂಡಿ ಕೀಲಿಮಣಿ ಕಳಚಿಬಿದ್ದಿತು…
ಒಡೆದು ಹೋಯಿತು ಬದುಕು.. ..

ಹೊಸದಾಗಿ ಹೊಸರಾಗ ಮೂಡುತಲೆ
ಮೌನರಾಗ ಮೌನವಾಗಿಯೇ
ರೋಧಿಸುತ್ತಲೇ ಇದೆ‌ ಇನ್ನೂತನಕ….
ಮನದಿ ಪಿಸುಮಾತು ಬಿಕ್ಕುತಲೇ ಹುಸಿ ನಕ್ಕು

ಶ್ರೀಮತಿ. ಲಲಿತಾ ಮ. ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ,
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬೆಳಗಾವಿ ನಗರ
9035527366
8073893993

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group