ಕವನ : ಹೊನ್ನಗನ್ನಡಿಯ ಚೆಲುವೆ

Must Read

ಹೊನ್ನಗನ್ನಡಿಯ ಚೆಲುವೆ

ನೇಸರನ ಹೊನ್ನಿನ ಕಿರಣಗಳ ಬಳಿಯಲಿ
ಲೋಕ ಮರೆತು ಇನಿಯನ ನೆನಪಿನಲಿ ತಣ್ಣಗೆ ಕುಳಿತಿರುವ
ಹೊನ್ನಗನ್ನಡಿಯ ಚೆಲುವೆಯೇ ಓದಿ
ಹೇಳು ಒಮ್ಮೆ
ಸಾಗರದಲೆಗಳ ಎದೆಯ ಮೇಲೆ ನೀ ಬರೆದ ಒಲವಿನೋಲೆ

ಮೇಘದೂತನ ಸಂದೇಶವಂದು ಕಾಳಿದಾಸನ ಲೀಲೆ
ಇನ್ಯಾವ ಕವಿಯ ಸೃಷ್ಟಿಗೆ ಮುನ್ನುಡಿ ಬರೆಯುತಿರುವೆ ಬಾಲೆ
ಪ್ರಣಯದೇವತೆಯಂತೆ ಬೆಳಗಿಸಿದ ನೇಸರನದೊಂದು ಅದ್ಭುತ ಕಲೆ
ಅಲೆಗಳನ್ನೇ ಸಮ್ಮಾನಿಸಿಬಿಡು ಹಾಕಿ ಕೊರಳಿಗೆ ಮುತ್ತಿನಮಾಲೆ

ಗಗನವನ್ನೇ ನಾಚಿಸುತಿದೆ ಹೊಳೆಯುವ
ಶ್ವೇತವರ್ಣದ ಧಿರಿಸು
ಕನಕಶಿಲೆಗಳ ಮೇಲಿನ
ಹೊನ್ನ ಬಿಂಬದ ಮೇಲೇಕೆ ಮುನಿಸು
ಸಾರಿ ಸಾರಿ ಹೇಳಿಬಿಡು
ನಿನ್ನಂದವಾಗಬೇಕು ಜಗದ ಕನಸು
ಪ್ರೇಮಭಿಕ್ಷೆ ಬೇಡಿದವನ ಮೇಲಿಲ್ಲವೇಕೆ ನಿನ್ನ ಮನಸು

ಜಗವೇ ಕುಣಿಯುತಿದೆ ಪ್ರೀತಿಯಿಂದಲೆ ಜಾಣೆ
ಪ್ರೇಮದಮೃತ ತುಂಬಿದ ಜಗವೇ ಒಂದು ಅರಮನೆ
ನಿನಗಾಗಿ ಕಾಯುತಿರುವ
ಹೊನ್ನಕನಸುಗಳ
ಚೆಲುವ ಎಲ್ಲಿಹನೋ ಕಾಣೆ
ಬರಬಹುದು ಸದಾ ನುಡಿಸುತಿರು ವಿರಹರಾಗದ ವೀಣೆ

✍️ ಶಿವಕುಮಾರ ಕೋಡಿಹಾಳ ಮೂಡಲಗಿ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group