ಒಂದು ಎಮರ್ಜೆನ್ಸಿ ಕವನ
ಬರುತಾಳೆ, ಬರುತಾಳೆ,
ಬಂದವಳೆ, ಮಹ ಕಾಳಿ
ದೆಹಲಿ ಗದ್ದುಗೆ ಅರಸಿ
ದಕ್ಷಿಣವವನರಸಿ
ದಿಕ್ಕೆಟ್ಟ ಮತಗಳನು
‘ಹಸು ಕರುವಿ’ಗೊಲಿಸಿ
ಪಾದಕ್ಕೆ ಬಿದ್ದವರ
ಪಾರ್ಲಿಮೆಂಟಿಗೆ ಕಳಿಸಿ
ಎದುರಾಡಿದವರನ್ನು
ಸೆರೆಯಲಿರಿಸಿ !
ಕರಮುಗಿದು ಶಿರಬಾಗೆ
ಇವಳು ಧಾರಾಳಿ
ಇಲ್ಲವೆನೆ, ಎದುರಾಗೆ
ಆದಾಳು ಕಾಳಿ
ಕದನ ಕಾರಣರಾದ
ಸೀತೆ ಪಾಂಚಾಲಿ ?
ಇಲ್ಲ, ತ್ರಿವಿಕ್ರಮನೆ
ಬಂದನೋ, ಈಕೆ ಮೈದಾಳಿ !
ಇವಳಿಟ್ಟ ಮೊದಲ ಹೆಜ್ಜೆಗೆ ಸಂವಿಧಾನ,
ಮತ್ತೊಂದು ಹೆಜ್ಜೆಯಲೇ
ಜನತಂತ್ರ ಮರಣ
ಇಡಲು ಹವಣಿಸುತಿಹಳು
ಮೂರನೇ ಪಾದವನ್ನ
ಮತ್ತೇನೋ ?ಮತ್ತಾರೋ ?
ಅದಕೆ ಬಲಿದಾನ !
( ತುರ್ತು ಪರಿಸ್ಥಿತಿ ಇದ್ದಾಗಲೇ ಫೆಬ್ರವರಿ 1977ರಲ್ಲಿ ಬರೆದ ಅಪ್ರಕಟಿತ ಕವನ)
ಡಾ. ಹೆಚ್ ಎಸ್ ಸುರೇಶ್
9448027400