ಕವನ : ಬಿಟ್ಟು ಬಿಡು

Must Read

ಬಿಟ್ಟು ಬಿಡು

ಮರೆಯಾಗಿ ಬಿಡು
ಅಮವಾಸ್ಯೆಯ ಚಂದ್ರನಹಾಗೆ
ತೊರೆದು ಬಿಡು
ನಿನ್ನ ಆದರಿಸದವರನು.

ತೆರೆಯೆಳೆದು ಬಿಡು
ದೂಷಿಸುವವರನು ಕಡೆಗಣಿಸಿ
ಮೇರೆ ಮೀರಿಬಿಡು
ನಿನ್ನದಲ್ಲದ ತಪ್ಪಿಗೆ ಒಪ್ಪಿಸಿದವರನು.

ಗೆರೆಯೆಳೆದು ಬಿಡು
ಅವಕಾಶವಾದಿಗಳ ದೂರಿಕರಿಸಿ
ತಾರೆಯಂತಾಗಿ ಬಿಡು
ಬೇರೆಯಾದವರು ಹಪಹಪಿಸುವಂತಾಗಿ.

ಕೆರೆ ಕಟ್ಟೆಯಾಗಿ ಬಿಡು
ಬಸವಳಿದವರ ಸಂತೈಸುವಿಕೆಯಲಿ
ನೆರವಾಗಿ ಬಿಡು
ನೆರೆಮನೆಯವರು ನನ್ನವರೆಂದು ಓಲೈಸುವಂತಾಗಿ.

ತೆರಳಿ ಬಿಡು
ನರಳುವ ಮನ್ನವೇ
ಬೆರಳಾಗಿ ಬಿಡು
ಕರುಳ ಕುಡಿಯ ಮಮತೆಗೆ.

ಸರಳಾಗಿ ಬಿಡು
ನಂಬಿಕೆ ದ್ರೋಹ ಬಗೆದವರಿಗೆ
ಹೊರಳಿ ಬಿಡು
ಬೇಡದ ವಸ್ತುಗಳ ಆಹ್ವಾನಕೆ.

ಬಿಟ್ಟು ಬಿಡು
ರಾಗ ದ್ವೆಷಗಳ ನಡೆಯ
ಕೊಟ್ಟು ಬಿಡು
ಒಲವಾಮೃತದ ಸುಧೆ.

ಕೊಟ್ಟು ಬಿಡು
ನಿನ್ನದಲ್ಲದ ವಸ್ತುವ
ಹೊಟ್ಟು ತೂರಿಬಿಡು
ಸತ್ವಯುತ ಜೀವನದ ನಡೆಗೆ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group