ಕವನ : ಉಳಿಸ ಬನ್ನಿ ಕನ್ನಡ

Must Read

ಉಳಿಸ ಬನ್ನಿ ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
ಇರಲಿ ಬೇರೆ
ಭಾಷೆ ಪ್ರೇಮ
ಅಗ್ರ ಪಟ್ಟ ಕನ್ನಡ

ಬಸವ ಹರಿಹರ
ರಾಘವಾ0ಕ
ಕವಿ ನುಡಿಯು ಕನ್ನಡ
ಹಕ್ಕಬುಕ್ಕ ರಾಷ್ಟಕೂಟ
ಚಾಲುಕ್ಯ ಹೊಯ್ಸಳ
ಗಂಗ ಕದಂಬರ ಕನ್ನಡ

ಕಾವೇರಿಯಿಂದ
ಗೋದಾವರಿವರೆಗಿನ
ಸೀಮೆ ದಾಟಿದ ಕನ್ನಡ
ಕೃಷ್ಣ ತುಂಗೆ ಮಲಪ್ರಭೆ
ಭೀಮೆ ಘಟಪ್ರಭೆ.
ಸಿಹಿ ನೀರಿನ ಕನ್ನಡ

ಕಾಕೊಸ್ಥನ ಹಲ್ಮಿಡಿ
ಬಾದಾಮಿಯ ಕಲೆಯ ಬಲೆ
ಶಾಸನದ ಕನ್ನಡ
ವಿಶ್ವ ಪ್ರೇಮ
ಮನೆಯ ಮಾತು
ಜಗದ ಬೆಳಕು ಕನ್ನಡ

ಉಳಿಸ ಬನ್ನಿ
ಉಳಿಸ ಬನ್ನಿ
ಉಳಿಸ ಬನ್ನಿ ಕನ್ನಡ
______________________
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group