ಹಾಸನದ ಸಾಹಿತ್ಯ ಸಂಘಟನೆ ಮನೆ ಮನೆ ಕವಿಗೋಷ್ಠಿ ಇವರ ವತಿಯಿಂದ 324ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ನಟ, ನಾಟಕಕಾರರು ಎಸ್.ಎಸ್.ಪುಟ್ಟೇಗೌಡರ ಪ್ರಾಯೋಜಕತ್ವದಲ್ಲಿ ಹಾಸನದ ಹೇಮಾವತಿ ನಗರ, 1ನೇ ಮುಖ್ಯ ರಸ್ತೆ ಇಲ್ಲಿನ ಗಹನ ಯೋಗ ಕೇಂದ್ರದಲ್ಲಿ ದಿ. 1-12-2024ರ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ನಡೆಯುವುದು.
ಜಿಲ್ಲೆಯ ಹಿರಿಯ ನಾಟಕಕಾರರು ಎಸ್.ಎಸ್.ಪುಟ್ಟೀಗೌಡ ವಿರಚಿತ ‘ಶಿವಶರಣ ರಾವಣ’ ನಾಟಕ ಕೃತಿ ಕುರಿತು ನಿವೃತ್ತ ಪ್ರಾಂಶುಪಾಲರು ಶ್ರೀಮತಿ ಜಿ.ಎಸ್. ಅನಸೂಯ ಇವರಿಂದ ಉಪನಾೃಸ ಏರ್ಪಡಿಸಿದೆ.
ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ನಿಟ್ಟೂರು ಜಯರಾಂ ಅವರು ಭಾಗವಹಿಸುವರು. ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕ ಗಾಯಕಿಯರಿಂದ ಭಾವಗೀತೆ ರಂಗಭೂಮಿ ಕಲಾವಿದರಿಂದ ರಂಗಗೀತೆಗಳ ಪ್ರಸ್ತುತಿಗೆ ಅವಕಾಶವಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಸಾಹಿತ್ಯಾಸಕ್ತರು, ಗಾಯಕರು, ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಗೊರೂರು ಅನಂತರಾಜು ಕೋರಿರುತ್ತಾರೆ.
*ಸಂಪರ್ಕಕ್ಕಾಗಿ ಸಂಖ್ಯೆಗಳು*
94494 62879-
ಗೊರೂರು ಅನಂತರಾಜು
9449311298-
ಸಮುದ್ರವಳ್ಳಿ ವಾಸು